

ಎರಡು ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳಬೇಕಿದೆ. ನಮ್ಮೆಲ್ಲರ ಪ್ರೀತಿಯ ಕತೆಗಳನ್ನು ಬರೆದ ನೇಮಿಚಂದ್ರ ಈ ಸಾರಿಯ ಫಿಷ್ ಮಾರ್ಕೆಟ್ಟಿನಲ್ಲಿ ನಮ್ಮನ್ನು ಎದುರಾಗಲಿದ್ದಾರೆ. ನೇಮಿಚಂದ್ರ ಅನ್ನುವ ಹೆಸರಲ್ಲೇ ಅನೇಕ ನಿಗೂಢಗಳಿವೆ. ನೇಮಿಚಂದ್ರ ಅವರ ಕಾವ್ಯನಾಮವಾ ಎಂದು ಕೇಳುವವರಿಂದ ಹಿಡಿದು, ಅವರ ಮಿಸೆಸ್ ಹೆಸರೇನು ಅಂತ ಕುತೂಹಲಿಗಳಾಗುವವರ ತನಕ, ನೇಮಿಚಂದ್ರ ಆಸಕ್ತಿ ಉಳಿಸಿಕೊಂಡವರು. ಹತ್ತು ಹಲವು ಸಂಗತಿಗಳ ಕುರಿತು, ಅದೇ ಆಸ್ಥೆ, ಆಸಕ್ತಿ ಮತ್ತು ಪ್ರೀತಿ ಇಟ್ಟುಕೊಂಡು ಬರೆಯುವವರು. ಅವರು ಫಿಶ್ ಮಾರ್ಕೆಟ್ಟಿಗೆ ಬರುತ್ತಿರುವುದು ಸಂತೋಷ. ಅವರ ಕತೆ ಕಾದಂಬರಿ ಮತ್ತು ಪ್ರವಾಸ ಕಥನಗಳ ಜೊತೆಗೆ ಅವರನ್ನು ಎದುರುಗೊಳ್ಳೋಣ.
ಕನಸುಗಳಿಗೆ ರೆಕ್ಕೆ ಹಟ್ಟಿ ಹಾರುವವರು ಎಂದು ಅವರನ್ನು ಜಿ ಎನ್ ಮೋಹನ್ ವರ್ಣಿಸಿದ್ದಾರೆ. ಆ ಮಾತಿಗೆ ಇನ್ನೊಂದು ಅರ್ಥವೂ ಉಂಟು. ಅವರು ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಿ. ಹೀಗಾಗಿ ಹಲವರ ಹಾರುವ ಕನಸಿಗೂ ಅವರೇ ರೆಕ್ಕೆ.
ಆ ಶನಿವಾರ ಬಿಟ್ಟು ಸೋಮವಾರಕ್ಕೆ ದಾಟಿಕೊಂಡರೆ ಚೇತನಾ ತೀರ್ಥಹಳ್ಳಿ ಕಥಾ ಸಂಕಲನ ಬಿಡುಗಡೆ. ಸೆನೆಟ್ ಹಾಲ್-ನಲ್ಲಿ ಕಥಾ ಕಾಲಕ್ಷೇಪ. ಆವತ್ತು ವೇದಿಕೆಯಲ್ಲಿ ಎಲ್ಲರಿಗೂ ವಿವೇಕ. ಸಭಾಂಗಣವೇ ಟೀನಾ ಝೋನ್, ಮಯೂರ-ವರ್ಮ ಬಸವರಾಜ್ ಕೂಡ ಜೊತೆಗಿರುತ್ತಾರೆ. ತೀರ್ಥಹಳ್ಳಿಯ ಚೇತನಾರಷ್ಟೇ ಚಂದಕ್ಕೆ ಪುಸ್ತಕವೂ ಹೊರಬಂದಿದೆ.
ಎರಡೂ ಸಂಭ್ರಮಗಳೂ ಈ ಮಳೆಗಾಲದ ತಂಪುಹೊತ್ತಲ್ಲಿ ನಿಮ್ಮನ್ನು ಬೆಚ್ಚಗಿರಿಸಲಿ, ವಿಸ್ಕಿಯಂತೆ.
ಆ ಶನಿವಾರ ಬಿಟ್ಟು ಸೋಮವಾರಕ್ಕೆ ದಾಟಿಕೊಂಡರೆ ಚೇತನಾ ತೀರ್ಥಹಳ್ಳಿ ಕಥಾ ಸಂಕಲನ ಬಿಡುಗಡೆ. ಸೆನೆಟ್ ಹಾಲ್-ನಲ್ಲಿ ಕಥಾ ಕಾಲಕ್ಷೇಪ. ಆವತ್ತು ವೇದಿಕೆಯಲ್ಲಿ ಎಲ್ಲರಿಗೂ ವಿವೇಕ. ಸಭಾಂಗಣವೇ ಟೀನಾ ಝೋನ್, ಮಯೂರ-ವರ್ಮ ಬಸವರಾಜ್ ಕೂಡ ಜೊತೆಗಿರುತ್ತಾರೆ. ತೀರ್ಥಹಳ್ಳಿಯ ಚೇತನಾರಷ್ಟೇ ಚಂದಕ್ಕೆ ಪುಸ್ತಕವೂ ಹೊರಬಂದಿದೆ.
ಎರಡೂ ಸಂಭ್ರಮಗಳೂ ಈ ಮಳೆಗಾಲದ ತಂಪುಹೊತ್ತಲ್ಲಿ ನಿಮ್ಮನ್ನು ಬೆಚ್ಚಗಿರಿಸಲಿ, ವಿಸ್ಕಿಯಂತೆ.
1 comment:
Jogi Saar,
>>ಸಭಾಂಗಣವೇ ಟೀನಾ ಝೋನ್, ಮಯೂರ-ವರ್ಮ ಬಸವರಾಜ್ ಕೂಡ ಜೊತೆಗಿರುತ್ತಾರೆ. ತೀರ್ಥಹಳ್ಳಿಯ ಚೇತನಾರಷ್ಟೇ ಚಂದಕ್ಕೆ ಪುಸ್ತಕವೂ ಹೊರಬಂದಿದೆ.
ಎರಡೂ ಸಂಭ್ರಮಗಳೂ ಈ ಮಳೆಗಾಲದ ತಂಪುಹೊತ್ತಲ್ಲಿ ನಿಮ್ಮನ್ನು ಬೆಚ್ಚಗಿರಿಸಲಿ, ವಿಸ್ಕಿಯಂತೆ.
>>
Are you refering to me. How I wish I could attend this function.
Regards,
Mayura
Post a Comment