
ತುಂಬ ಒಳ್ಳೆಯ ಕೃತಿಗೆ ವಿಮರ್ಶಕನ ಹಂಗಿಲ್ಲ. ತುಂಬ ಕೆಟ್ಟ ಕೃತಿಗೂ ವಿಮರ್ಶಕ ಬೇಕಿಲ್ಲ. ಒಳ್ಳೆಯದೋ ಕೆಟ್ಟದೋ ಅಂಥ ಗೊತ್ತಾಗದಂಥ ಕೃತಿಗಳನ್ನು ಮನದಟ್ಟು ಮಾಡಿಸುವುದಕ್ಕಷ್ಟೇ ನಮಗೆ ಟೀಕಾಕಾರ ಬೇಕು.
ಆದರೆ ಕೆಲವೊಮ್ಮೆ ಯಾರ ಹಂಗೂ ಇಲ್ಲದ ಕೃತಿಗಳು ಬರುವುದುಂಟು. ಅವು ದೂರಬೆಟ್ಟದ ತಪ್ಪಲಲ್ಲಿ ಸಹಜವಾಗಿ ಅರಳುವ ಕಾಡು ಹೂವಿನಂತೆ ನಳನಳಿಸುತ್ತಿರುತ್ತವೆ. ಆ ಹೂವು ಹೇಗೆ ಅರಳಿತು, ಅದಕೆ ನೀರೆರೆದವರು ಯಾರು? ಆ ಹೂವಿಗೇಕೆ ಅಷ್ಟೊಂದು ಬಣ್ಣ? ಮುಂತಾದ ಪ್ರಶ್ನೆಗಳನ್ನೇ ಹುಟ್ಟುಹಾಕದ ಆ ಹೂವು ಸುಮ್ಮನೆ ಖುಷಿಕೊಡುತ್ತದೆ.
ಹಾಗೆ ಅರಳಿದ ಹೂವಿನಂಥ ಕೃತಿಯೊಂದು ಇಲ್ಲಿದೆ;
ಹಾಳೂರಿನ ಅನುಭವ
ವೆಂಕಣ್ಣಯ್ಯನವರು ಶೇಕದಾರರಾದ ಮೇಲೆ ಆಗಿನ ಕಾಲದ ಪದ್ಧತಿಯಂತೆ ಒಂದು ಒಳ್ಳೆಯ ಕುದುರೆಯನ್ನು ಕೊಂಡು, ಅದರ ಮೇಲೆ ಹಳ್ಳಿಗಳಿಗೆ ಹೋಗಿಬರುತ್ತಿದ್ದರು. ಸಾಯ್ ಬಾಬಿನ ಹಣವನ್ನು ಅವರೇ ಖುದ್ದಾಗಿ ವಸೂಲ್ಮಾಡಿ ತಾಲ್ಲೂಕು ಕಛೇರಿಗೆ ಜಮಾ ಮಾಡಿಸಬೇಕಿತ್ತು. ಸಾಮಾನ್ಯವಾಗಿ ಪ್ರತಿತಿಂಗಳೂ ಈ ಕೆಲಸವಿದ್ದೇ ಇರುತ್ತಿತ್ತು. ಅವರು ಬೆಳಗಿನ ಪೂಜೆ, ಉಪಾಹಾರಗಳನ್ನು ಮಾಡಿ ಮುಗಿಸಿ, ತಾಲ್ಲೂಕಿನ ಮುಖ್ಯಸ್ಥಳವಾದ ಚಳ್ಳಕೆರೆಗೆ ಹೋಗಿ ಸಂಜೆಯೊಳಗಾಗಿ ಆ ಕೆಲಸವನ್ನು ಮುಗಿಸಿ ಮರುದಿನ ಬೆಳಗೆರೆಗೆ ಹಿಂದಿರುಗಿ ಬರುವ ಪದ್ಧತಿ. ಹೀಗಿರುತ್ತಿರಲು ಅವರು ಒಮ್ಮೆ ಸಂಜೆ ನಾಲ್ಕು ಗಂಟೆೆಯ ಮೇಲೆ ಚಳ್ಳಕೆರೆಗೆ ಹೊರಟರು. ಸಾಯ್ ಬಾಬಿನ ಐನೂರು ರುಪಾಯಿಗಳನ್ನು ಅವರು ಕೊಡಹೋಗಬೇಕಾಗಿತ್ತು. ಎಲ್ಲವೂ ಬೆಳ್ಳಿಯ ರುಪಾಯಿಗಳು. ಆ ಹಣವನ್ನು ಹಮ್ಮಿಣಿಯಲ್ಲಿ ತುಂಬಿ ನಡುವಿಗೆ ಕಟ್ಟಿಕೊಂಡು ದೇವರೇ ಗತಿ ಎಂದು ಪ್ರಯಾಣ ಹೊರಟರು. ಸಂಜೆ ಮಬ್ಬುಗತ್ತಲು ಪಸರಿಸುವ ವೇಳೆಗೆ ಉಳ್ಳರ್ತಿಯನ್ನು ಸೇರಿದರು. ಅಲ್ಲಿಂದ ಚಳ್ಳಕೆರೆಗೆ ಒಂಬತ್ತು ಮೈಲಿ. ಉಳ್ಳರ್ತಿಯಿಂದ ಮೂರು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಕತ್ತಲು ಕವಿಯಿತು. ಹಾದಿಯಲ್ಲಿ ಒಂದು ಹಳ್ಳ-ಅದನ್ನು ಗರಣಿ ಎಂದು ಕರೆಯುತ್ತಾರೆ. ಅದನ್ನು ದಾಟುತ್ತಲೇ ಒಂದು ಹಳ್ಳಿ ಕಾಣಿಸಿತು. ಊರಿನ ತುಂಬ ಜನ ತುಂಬಿದ್ದಾರೆ. ಮನೆಮನೆಯಿಂದಲೂ ದೀಪದ ಬೆಳಕು ಇಣುಕು ಹಾಕುತ್ತಿದೆ. ಊರ ಮುಂದಿನ ಒಂದು ಕಟ್ಟೆಯ ಮೇಲೆ ಊರಿನ ಶಾನುಭೋೋಗ, ಪಟೇಲ ಹಾಗೂ ಕೆಲವು ದೊಡ್ಡ ಮನುಷ್ಯರು ಕೂತು ಮಾತಾಡುತ್ತಿದ್ದಾರೆ. ವೆಂಕಣ್ಣಯ್ಯನವರಿಗೆ ಇದು ಯಾವುದೋ ಪರಿಚಿತ ಗ್ರಾಮುವೆಂಬ ಭಾವನೆ ಬಂತು. ಅಲ್ಲಿ ಮಾತನಾಡುತ್ತಾ ಕುಳಿತಿದ್ದ ಜನಗಳೂ ಪರಿಚಿತರೆಂಬಂತೆಯೇ ಭಾಸವಾಯಿತು. ಆದರೆ ಅದು ಯಾವ ಗ್ರಾಮ, ಯಾವಾಗ ನೋಡಿದ್ದು ಎಂಬುದು ಮಾತ್ರ ನೆನಪಾಗಲೊಲ್ಲದು. ಈ ಸಂದಿಗ್ಧ ಮನಸ್ಸಿನಲ್ಲಿಯೇ ಅವರು ಊರಬಾಗಿಲನ್ನು ಸೇರಿದರು. ಒಡನೆಯೇ ಅಲ್ಲಿ ಕುಳಿತಿದ್ದವರಲ್ಲಿ ಒಬ್ಬ ತಟ್ಟನೆ ಮೇಲಕ್ಕೆದ್ದು ಒಂದು ಭಯ ಭಕ್ತಿಯಿಂದ ಕೈಜೋಡಿಸಿ `ಶೇಕದಾರ ಸ್ವಾಮಿಯವರಿಗೆ ನಮಸ್ಕಾರ. ದಯಮಾಡಿಸಬೇಕು' ಎಂದು ಸ್ವಾಗತಿಸಿದ. ಅಲ್ಲಿಯೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನು `ಎಲೋ ನಿಂಗ, ನಮ್ಮ ಮನೆಗೆ ಹೋಗಿ ಒಂದು ಜಮಖಾನವನ್ನೂ ಒಂದು ಚಾಪೆಯನ್ನೂ ತಂದು ಆಂಜನೇಯನ ದೇವಸ್ಥಾನದಲ್ಲಿ ಹಾಸು' ಎಂದು ಹೇಳಿದ. ಅವನು ಓಡುತ್ತಾ ಹೋಗಿ ಚಾಪೆ, ಜಮಖಾನ ತಂದು ಹಾಸಿದ ಮೇಲೆ ಕುದುರೆಯ ಮೇಲೆ ಹಾಕಿದ್ದ ಥಡಿಯನ್ನು ತೆಗೆದು, ಗುಡಿಯೊಳಗಿಟ್ಟ, ಕುದುರೆಯನ್ನು ದೇವಸ್ಥಾನದ ಮುಂದೆ ಕಟ್ಟಿಹಾಕಿ, ಹುಲ್ಲು ತಂದು ಹಾಕಿದ. ದೇವಸ್ಥಾನದಲ್ಲಿ ಮಾರುತಿಯ ಎದುರಿಗೆ ದೀಪ ಢಾಳಾಗಿ ಉರಿಯುತ್ತಿತ್ತು. ವೆಂಕಣ್ಣಯ್ಯನವರು ಒಳಗೆ ಹೋಗಿ, ದೇವರಿಗೆ ನಮಸ್ಕರಿಸಿ, ಜಮಖಾನದ ಮೇಲೆ ಕುಳಿತರು. ಅವರೊನಿದ್ದ ಆಗಂತುಕ `ಸ್ವಾಮಿ, ನಾನು ಇಲ್ಲಿನ ಶಾನುಭೋೋಗ. ಏಳಿ ಮನೆಗೆ ಹೋಗೋಣ, ನಿಮ್ಮ ಆಹ್ನಿಕಕ್ಕೂ ಭೋಜನಕ್ಕೂ ವ್ಯವಸ್ಥೆ ಮಾಡುತ್ತೇನೆ' ಎಂದು ಆದರದಿಂದ ಆಹ್ವಾನಿಸಿದ. ವೆಂಕಣ್ಣಯ್ಯನವರು `ಶಾನುಭೋಗರೇ, ನಾನು ರಾತ್ರಿಯ ಹೊತ್ತು ಊಟ ಮಾಡುವುದಿಲ್ಲ. ಹತ್ತಿರದಲ್ಲಿಯೇ ಹಳ್ಳವಿದೆ. ಅಲ್ಲಿಯೇ ಕೈಕಾಲು ತೊಳೆದು ಸಂಧ್ಯಾವಂದನೆ ಮಾಡಿ ಬರುತ್ತೇನೆ. ಅಲ್ಲಿಯವರೆಗೆ ಇಲ್ಲಿ ಯಾರನ್ನಾದರೂ ಕಾವಲಿರುವಂತೆ ಅಪ್ಪಣೆ ಮಾಡಿ' ಎಂದು ಹೇಳಿದರು. ಆ ಶಾನುಭೋಗ ತಳವಾರನನ್ನು ಕೂಗಿ ಕರೆದು ಅಲ್ಲಿ ಕಾವಲಿರುವಂತೆ ಅಪ್ಪಣೆ ಮಾಡಿದ.ದೇವಸ್ಥಾನದಿಂದ ಇಪ್ಪತ್ತು ಹೆಜ್ಜೆ ದೂರದಲ್ಲಿಯೇ ಹರಿಯುತ್ತಿದ್ದ ಹಳ್ಳದಲ್ಲಿ ವೆಂಕಣ್ಣನವರು ಕಾಲು ತೊಳೆದುು, ಸಂಧ್ಯಾವಂದನೆ ಮಾಡಿ ಮುಗಿಸಿದರು. ಅಲ್ಲಿಂದ ಅವರು ದೇವಸ್ಥಾನಕ್ಕೆ ಮರಳಿ ಬರುವ ವೇಳೆಗೆ ಒಂದು ಶುಭ್ರವಾದ ಹಿತ್ತಾಳೆಯ ಪಾತ್ರೆ ತುಂಬ ಸಕ್ಕರೆ ಬೆರೆಸಿದ ಘಮಘಮಿಸುವ ಹಸುವಿನ ಹಾಲನ್ನೂ, ಸೊಗಸಾದ ಒಂದು ಚಿಪ್ಪು ಬಾಳೆಹಣ್ಣನ್ನೂ ತಂದಿಟ್ಟುಕೊಂಡು ಕಾದಿದ್ದರು. ` ಈ ಬಡವನ ಮನೆಯಲ್ಲಿ ಊಟವನ್ನಂತೂ ಮಾಡುವಂತಿಲ್ಲ. ಈ ಹಾಲು-ಹಣ್ಣುಗಳನ್ನಾದರೂ ಸ್ವೀಕರಿಸಿ ನನ್ನ ಪುನೀತನನ್ನಾಗಿ ಮಾಡಬೇಕು. ಇಲ್ಲದಿದ್ದರೆ ಈ ಬಡವನ ಮನಸ್ಸಿಗೆ ಸಮಾಧಾನ ಆಗುವುದಿಲ್ಲ' ಎಂದು ಅಂಗಲಾಚಿ ಬೇಡಿಕೊಂಡ. ವೆಂಕಣ್ಣಯ್ಯನವರು ಆತನ ಪ್ರಾರ್ಥನೆಯನ್ನು ನಿರಾಕರಿಸಲಾಗದೆ, ಹಾಲು ಹಣ್ಣುಗಳನ್ನು ಆ ರಾಮದೂತನಿಗೆ ನೈವೇದ್ಯ ಮಾಡಿ, ಶ್ರೀರಾಮರಕ್ಪಾಮಂತ್ರದಿಂದ ಪುನೀತವಾಗಿದ್ದ ಆ ಹಣ್ಣುಗಳನ್ನು ತಿಂದು,ಹಾಲು ಕುಡಿದರು. ಅವೆರಡೂ ತುಂಬ ರುಚಿಯಾಗಿದ್ದವು.
ಶೇಕದಾರರು ಬಳಿಕ ಶಾನುಭೋೋಗನೊಡನೆ ಲೋಕಾಭಿರಾಮವಾಗಿ ಮಾತಾಡುತ್ತಾ, ಆ ಊರಿನ ಹೆಸರು ಹೊಸಹಳ್ಳಿಯೆಂದೂ, ಚಳ್ಳಕೆರೆ ತಾಲೂಕು ತಳುಕು ಹೋಬಳಿಗೆ ಸೇರಿದ ಗ್ರಾಮವೆಂದೂ, ಆ ಊರಿಗೆ ಶಾನುಭೋೋಗನಾದ ಆತನ ಹೆಸರು ತಿಮ್ಮಪ್ಪನೆಂದೂ ತಿಳಿದುಕೊಂಡರು. ಆತ ಶೇಕದಾರರನ್ನು ಕುರಿತು ` ಮಹಾಸ್ವಾಮಿ, ತಮ್ಮಂಥ ಹಿರಿಯರ ಆಶೀರ್ವಾದದಿಂದ ನನಗೆ ಯಾವ ತೊಂದರೆಯೂ ಇಲ್ಲ. ತಮ್ಮಂತಹ ಸತ್ಬ್ರಾಹ್ಮಣರ ಸೇವೆಯಿಂದ ನಾನು ಧನ್ಯನಾದೆ. ಇಲ್ಲಿಗೆ ಸಮೀಪದ ಹಳ್ಳಿಗಳು ಪರಶುರಾಮಪುರ ಹೋಬಳಿಗೆ ಸೇರಿದವು. ಅಲ್ಲಿಗೆ ತಾವು ಬಂದು ಹೋಗುವಾಗ ನಾನು ತಮ್ಮನ್ನು ಅನೇಕ ಸಲ ನೋಡಿದ್ದೇನೆ. ತಮ್ಮ ಗುರುತು ನನಗೆ ಚೆನ್ನಾಗಿಯೇ ಇದೆ' ಎಂದ ಹೊಗಳಿದ. ಆ ವೇಳೆಗೆ ರಾತ್ರಿ ಹತ್ತುಗಂಟೆಯಾಯಿತು. ಶಾನುಭೋಗ ತನ್ನ ಅತಿಥಿಯನ್ನು ಕುರಿತು `ಮಹಾಸ್ವಾಮಿ ತಾವಿನ್ನು ಮಲಗೋಣವಾಗಲಿ, ನಾನೂ ಮನೆಗೆ ಹೋಗುತ್ತೇನೆ' ಎಂದು ಅವರಿಗೆ ನಮಸ್ಕರಿಸಿ ಮೇಲೆದ್ದ.
ಆಗ ವೆಂಕಣ್ಣಯ್ಯನವರು `ತಿಮ್ಮಪ್ಪನವರೇ, ಇದು ಪರಸ್ಥಳ. ದೇವಸ್ಥಾನದ ಬಾಗಿಲು ಭದ್ರವಿರುವಂತೆ ಕಾಣುತ್ತಿಲ್ಲ. ಅಲ್ಲದೇ ಇದು ಊರ ಹೊರಗಿದೆ. ನನ್ನ ಹತ್ತಿರ ಈಗತಾನೇ ವಸೂಲಾದ ಭಾರೀ ಹಣವಿದೆ. ನಾನು ಹುಷಾರಾಗಿರುವುದು ಮೇಲು. ಇದು ನಾಳೆಯ ದಿನ ಖಜಾನೆಗೆ ಇರಸಾಲಾಗಬೇಕಾದ ಹಣ. ರಾತ್ರಿಯಲ್ಲಿ ಒಂಟಿಯಾಗಿರಬೇಕಾದ ನನ್ನ ಬಳಿ ಇಷ್ಟು ದೊಡ್ಡ ಮೊತ್ತ ಇರುವುದು ಸರಿಯಲ್ಲ. ಆದ್ದರಿಂದ ಈ ಹಣವನ್ನು ರಾತ್ರಿ ನಿಮ್ಮಲ್ಲೇ ಜೋಪಾನವಾಗಿಟ್ಟುಕೊಂಡಿದ್ದು, ಬೆಳಗೆರೆಗೆ ನಾನು ಹೊರಡುವ ಹೊತ್ತಿಗೆ ಹಿಂದಕ್ಕೆ ತಂದುಕೊಡಿ' ಎಂದು ಹೇಳಿ, ತಮ್ಮ ಸೊಂಟದಲ್ಲಿದ್ದ ಹಮ್ಮಿಣಿಯ್ನು ಬಿಚ್ಚಿ ತೆಗೆದು ಶಾನುಭೋಗರ ಕೈಲಿ ಕೊಟ್ಟರು. ಶಾನುಭೋಗ ತಿಮ್ಮಪ್ಪ ` ಅಗತ್ಯವಾಗಿ ಆಗಲಿ ಮಹಾಸ್ವಾಮಿ. ತಾವು ನಿಶ್ಚಿಂತೆಯಾಗಿ ನಿದ್ದೆ ಮಾಡೋಣವಾಗಲಿ' ಎಂದು ಹೇಳಿ ಹಣದ ಹಮ್ಮಿಣಿಯೊಂದಿಗೆ ತನ್ನ ಮನೆಗೆ ಹೋದ. ವೆಂಕಣ್ಣಯ್ಯನವರು ಹಾಯಾಗಿ ನಿದ್ರೆ ಹೋದರು.
ವೆಂಕಣ್ಣಯ್ಯನವರು ಮಾಮೂಲು ಪದ್ಧತಿಯಂತೆ ಪಂಚಪಂಚ ಉಷಃಕಾಲಕ್ಕೆದ್ದು ಹಾಸಿಗೆಯಲ್ಲಿ ಕುಳಿತು ಕಣ್ಮುಚ್ಚಿಕೊಂಡೇ ಪ್ರಾತಃಸ್ಮರಣೆಯನ್ನು ಮಾಡಿ ಮುಗಿಸಿದರು. ಆ ವೇಳೆಗೆ ಸಾಮಾನ್ಯವಾಗಿ ಕೋಳಿ ಕೂಗಬೇಕು. ನೇಗಿಲಯೋಗಿ ಎತ್ತುಗಳನ್ನಟ್ಟಿಕೊಂಡು ಹೊಲಗಳ ಹಾದಿ ಹಿಡಿಯಬೇಕು; ಹೆಣ್ಣುಗಳೆದ್ದು ಹಾಡುತ್ತಾ ರಾಗಿ ಬೀಸಬೇಕು, ಅಕ್ಕಿ ಕುಟ್ಟಬೇಕು, ಅಂಗಣಕ್ಕೆ ಸಗಣಿ ನೀರು ಹಾಕಬೇಕು. ದನಗಳಿಗೆ ಹುಲ್ಲು ಹಾಕಿ ಹಾಲು ಕರೆಯಬೇಕು. ಹಕ್ಕಿಗಳು ಮರಗಳ ಮೇಲೆ ಕುಳಿತು ಚಿಲಿಪಿಲಿಗುಟು್ಟತ್ತಿರಬೇಕು. ಆದರೆ ಅದೊಂದೂ ಅಲ್ಲಿ ಕಾಣಿಸಲಿಲ್ಲ. ಶೇಕದಾರರು ಅರ್ಧಂಟೆ ಕಾದರು. ಕೋಳಿ ಕೂಗಲಿಲ್ಲ. ಜನರ ಚಲನವಲನ ಇಲ್ಲ. ಬೆಳಕು ಹರಿಯುತ್ತಾ ಬಂದಂತೆ ತಾವು ಮಲಗಿದ್ದ ಹಾಸಿಗೆ ಕಾಣಿಸಲಿಲ್ಲ.ಅದಕ್ಕೆ ಬದಲಾಗಿ ಸೊಪ್ಪುಸದೆಗಳ ರಾಸು ಕಾಣಿಸಿತು. ಎದ್ದು ಗುಡಿಯ ಮುಂದಿನ ಕಟ್ಟೆಯ ಮೇಲೆ ನಿಂತು ನೋಡಿದರು.
ಅಲ್ಲೇನಿದೆ? ಮನೆಗಳೂ ಇಲ್ಲ, ಜನರೂ ಇಲ್ಲ. ಹರಕು ಮುರುಕು ಗೋಡೆಗಳು, ಅಸ್ತವ್ಯಸ್ತ ಬಿದ್ದಿರುವ ಕಲ್ಲುರಾಶಿ, ಮಣ್ಣಿನ ಗುಪ್ಪೆ. ಅವುಗಳ ನಡುವೆ ಬೆಳೆದಿರುವ ಕಾಡುಗಿಡಗಳು. ಅಲ್ಲಲ್ಲಿಯೇ ಹರಿದಾಡುತ್ತಿರುವ ಹುಳ ಹುಪ್ಪಟೆ. ಅದೊಂದು ಹಾಳೂರು.
ವೆಂಕಣ್ಣಯ್ಯನವರಿಗೆ ದಿಗ್ಭ್ರಮೆಯಾಯಿತು. ತಾವೆಂಥ ಅವಿವೇಕವನ್ನು ಮಾಡಿದ ಹಾಗಾಯಿತು. ಐದುನೂರು ರುಪಾಯಿಗಳ ದೊಡ್ಡ ಗಂಟನ್ನು ಶಾನುಭೋೋಗ ದೆವ್ವದ ಕೈಯಲ್ಲಿ ಕೊಟ್ಟುದಾಯಿತಲ್ಲ. ಅಷ್ಟು ದೊಡ್ಡ ಮೊತ್ತವನ್ನು ಮತ್ತೆ ಜೋಡಿಸುವುದು ಹೇಗೆ? ಯಾರು ಕೊಟ್ಟಾರು? ಎಲ್ಲಿಂದ ತರಬೇಕು? ಇರಸಾಲಿನ ಹಣ ಒಡನೆಯೇ ಪಾವತಿ ಆಗದಿದ್ದರೆ ತಮ್ಮ ಗತಿ ಏನು? ಸರ್ಕಾರ ತಮ್ಮನ್ನು ಸುಮ್ಮನೇ ಬಿಟ್ಟೀತೇ?
*****
ತ. ಸು. ಶಾಮರಾಯರು ಬರೆದ ` ಮೂರು ತಲೆಮಾರು' ಕೃತಿಯ ಆಯ್ದ ಅಧ್ಯಾಯದ ಮೊದಲ ಭಾಗ ಇದು. ಎಲ್ಲಾ ಪ್ರಶ್ನೆಗಳನ್ನೂ ಮರೆತು ಇದರ ರೋಚಕತೆಯನ್ನು ಅನುಭವಿಸಿ. ಮುಂದಿನ ಭಾಗ ನಾಳೆ. ಅಲ್ಲಿಯ ತನಕ ದೆವ್ವದ ನೆನಪು.
ಆದರೆ ಕೆಲವೊಮ್ಮೆ ಯಾರ ಹಂಗೂ ಇಲ್ಲದ ಕೃತಿಗಳು ಬರುವುದುಂಟು. ಅವು ದೂರಬೆಟ್ಟದ ತಪ್ಪಲಲ್ಲಿ ಸಹಜವಾಗಿ ಅರಳುವ ಕಾಡು ಹೂವಿನಂತೆ ನಳನಳಿಸುತ್ತಿರುತ್ತವೆ. ಆ ಹೂವು ಹೇಗೆ ಅರಳಿತು, ಅದಕೆ ನೀರೆರೆದವರು ಯಾರು? ಆ ಹೂವಿಗೇಕೆ ಅಷ್ಟೊಂದು ಬಣ್ಣ? ಮುಂತಾದ ಪ್ರಶ್ನೆಗಳನ್ನೇ ಹುಟ್ಟುಹಾಕದ ಆ ಹೂವು ಸುಮ್ಮನೆ ಖುಷಿಕೊಡುತ್ತದೆ.
ಹಾಗೆ ಅರಳಿದ ಹೂವಿನಂಥ ಕೃತಿಯೊಂದು ಇಲ್ಲಿದೆ;
ಹಾಳೂರಿನ ಅನುಭವ
ವೆಂಕಣ್ಣಯ್ಯನವರು ಶೇಕದಾರರಾದ ಮೇಲೆ ಆಗಿನ ಕಾಲದ ಪದ್ಧತಿಯಂತೆ ಒಂದು ಒಳ್ಳೆಯ ಕುದುರೆಯನ್ನು ಕೊಂಡು, ಅದರ ಮೇಲೆ ಹಳ್ಳಿಗಳಿಗೆ ಹೋಗಿಬರುತ್ತಿದ್ದರು. ಸಾಯ್ ಬಾಬಿನ ಹಣವನ್ನು ಅವರೇ ಖುದ್ದಾಗಿ ವಸೂಲ್ಮಾಡಿ ತಾಲ್ಲೂಕು ಕಛೇರಿಗೆ ಜಮಾ ಮಾಡಿಸಬೇಕಿತ್ತು. ಸಾಮಾನ್ಯವಾಗಿ ಪ್ರತಿತಿಂಗಳೂ ಈ ಕೆಲಸವಿದ್ದೇ ಇರುತ್ತಿತ್ತು. ಅವರು ಬೆಳಗಿನ ಪೂಜೆ, ಉಪಾಹಾರಗಳನ್ನು ಮಾಡಿ ಮುಗಿಸಿ, ತಾಲ್ಲೂಕಿನ ಮುಖ್ಯಸ್ಥಳವಾದ ಚಳ್ಳಕೆರೆಗೆ ಹೋಗಿ ಸಂಜೆಯೊಳಗಾಗಿ ಆ ಕೆಲಸವನ್ನು ಮುಗಿಸಿ ಮರುದಿನ ಬೆಳಗೆರೆಗೆ ಹಿಂದಿರುಗಿ ಬರುವ ಪದ್ಧತಿ. ಹೀಗಿರುತ್ತಿರಲು ಅವರು ಒಮ್ಮೆ ಸಂಜೆ ನಾಲ್ಕು ಗಂಟೆೆಯ ಮೇಲೆ ಚಳ್ಳಕೆರೆಗೆ ಹೊರಟರು. ಸಾಯ್ ಬಾಬಿನ ಐನೂರು ರುಪಾಯಿಗಳನ್ನು ಅವರು ಕೊಡಹೋಗಬೇಕಾಗಿತ್ತು. ಎಲ್ಲವೂ ಬೆಳ್ಳಿಯ ರುಪಾಯಿಗಳು. ಆ ಹಣವನ್ನು ಹಮ್ಮಿಣಿಯಲ್ಲಿ ತುಂಬಿ ನಡುವಿಗೆ ಕಟ್ಟಿಕೊಂಡು ದೇವರೇ ಗತಿ ಎಂದು ಪ್ರಯಾಣ ಹೊರಟರು. ಸಂಜೆ ಮಬ್ಬುಗತ್ತಲು ಪಸರಿಸುವ ವೇಳೆಗೆ ಉಳ್ಳರ್ತಿಯನ್ನು ಸೇರಿದರು. ಅಲ್ಲಿಂದ ಚಳ್ಳಕೆರೆಗೆ ಒಂಬತ್ತು ಮೈಲಿ. ಉಳ್ಳರ್ತಿಯಿಂದ ಮೂರು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಕತ್ತಲು ಕವಿಯಿತು. ಹಾದಿಯಲ್ಲಿ ಒಂದು ಹಳ್ಳ-ಅದನ್ನು ಗರಣಿ ಎಂದು ಕರೆಯುತ್ತಾರೆ. ಅದನ್ನು ದಾಟುತ್ತಲೇ ಒಂದು ಹಳ್ಳಿ ಕಾಣಿಸಿತು. ಊರಿನ ತುಂಬ ಜನ ತುಂಬಿದ್ದಾರೆ. ಮನೆಮನೆಯಿಂದಲೂ ದೀಪದ ಬೆಳಕು ಇಣುಕು ಹಾಕುತ್ತಿದೆ. ಊರ ಮುಂದಿನ ಒಂದು ಕಟ್ಟೆಯ ಮೇಲೆ ಊರಿನ ಶಾನುಭೋೋಗ, ಪಟೇಲ ಹಾಗೂ ಕೆಲವು ದೊಡ್ಡ ಮನುಷ್ಯರು ಕೂತು ಮಾತಾಡುತ್ತಿದ್ದಾರೆ. ವೆಂಕಣ್ಣಯ್ಯನವರಿಗೆ ಇದು ಯಾವುದೋ ಪರಿಚಿತ ಗ್ರಾಮುವೆಂಬ ಭಾವನೆ ಬಂತು. ಅಲ್ಲಿ ಮಾತನಾಡುತ್ತಾ ಕುಳಿತಿದ್ದ ಜನಗಳೂ ಪರಿಚಿತರೆಂಬಂತೆಯೇ ಭಾಸವಾಯಿತು. ಆದರೆ ಅದು ಯಾವ ಗ್ರಾಮ, ಯಾವಾಗ ನೋಡಿದ್ದು ಎಂಬುದು ಮಾತ್ರ ನೆನಪಾಗಲೊಲ್ಲದು. ಈ ಸಂದಿಗ್ಧ ಮನಸ್ಸಿನಲ್ಲಿಯೇ ಅವರು ಊರಬಾಗಿಲನ್ನು ಸೇರಿದರು. ಒಡನೆಯೇ ಅಲ್ಲಿ ಕುಳಿತಿದ್ದವರಲ್ಲಿ ಒಬ್ಬ ತಟ್ಟನೆ ಮೇಲಕ್ಕೆದ್ದು ಒಂದು ಭಯ ಭಕ್ತಿಯಿಂದ ಕೈಜೋಡಿಸಿ `ಶೇಕದಾರ ಸ್ವಾಮಿಯವರಿಗೆ ನಮಸ್ಕಾರ. ದಯಮಾಡಿಸಬೇಕು' ಎಂದು ಸ್ವಾಗತಿಸಿದ. ಅಲ್ಲಿಯೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನು `ಎಲೋ ನಿಂಗ, ನಮ್ಮ ಮನೆಗೆ ಹೋಗಿ ಒಂದು ಜಮಖಾನವನ್ನೂ ಒಂದು ಚಾಪೆಯನ್ನೂ ತಂದು ಆಂಜನೇಯನ ದೇವಸ್ಥಾನದಲ್ಲಿ ಹಾಸು' ಎಂದು ಹೇಳಿದ. ಅವನು ಓಡುತ್ತಾ ಹೋಗಿ ಚಾಪೆ, ಜಮಖಾನ ತಂದು ಹಾಸಿದ ಮೇಲೆ ಕುದುರೆಯ ಮೇಲೆ ಹಾಕಿದ್ದ ಥಡಿಯನ್ನು ತೆಗೆದು, ಗುಡಿಯೊಳಗಿಟ್ಟ, ಕುದುರೆಯನ್ನು ದೇವಸ್ಥಾನದ ಮುಂದೆ ಕಟ್ಟಿಹಾಕಿ, ಹುಲ್ಲು ತಂದು ಹಾಕಿದ. ದೇವಸ್ಥಾನದಲ್ಲಿ ಮಾರುತಿಯ ಎದುರಿಗೆ ದೀಪ ಢಾಳಾಗಿ ಉರಿಯುತ್ತಿತ್ತು. ವೆಂಕಣ್ಣಯ್ಯನವರು ಒಳಗೆ ಹೋಗಿ, ದೇವರಿಗೆ ನಮಸ್ಕರಿಸಿ, ಜಮಖಾನದ ಮೇಲೆ ಕುಳಿತರು. ಅವರೊನಿದ್ದ ಆಗಂತುಕ `ಸ್ವಾಮಿ, ನಾನು ಇಲ್ಲಿನ ಶಾನುಭೋೋಗ. ಏಳಿ ಮನೆಗೆ ಹೋಗೋಣ, ನಿಮ್ಮ ಆಹ್ನಿಕಕ್ಕೂ ಭೋಜನಕ್ಕೂ ವ್ಯವಸ್ಥೆ ಮಾಡುತ್ತೇನೆ' ಎಂದು ಆದರದಿಂದ ಆಹ್ವಾನಿಸಿದ. ವೆಂಕಣ್ಣಯ್ಯನವರು `ಶಾನುಭೋಗರೇ, ನಾನು ರಾತ್ರಿಯ ಹೊತ್ತು ಊಟ ಮಾಡುವುದಿಲ್ಲ. ಹತ್ತಿರದಲ್ಲಿಯೇ ಹಳ್ಳವಿದೆ. ಅಲ್ಲಿಯೇ ಕೈಕಾಲು ತೊಳೆದು ಸಂಧ್ಯಾವಂದನೆ ಮಾಡಿ ಬರುತ್ತೇನೆ. ಅಲ್ಲಿಯವರೆಗೆ ಇಲ್ಲಿ ಯಾರನ್ನಾದರೂ ಕಾವಲಿರುವಂತೆ ಅಪ್ಪಣೆ ಮಾಡಿ' ಎಂದು ಹೇಳಿದರು. ಆ ಶಾನುಭೋಗ ತಳವಾರನನ್ನು ಕೂಗಿ ಕರೆದು ಅಲ್ಲಿ ಕಾವಲಿರುವಂತೆ ಅಪ್ಪಣೆ ಮಾಡಿದ.ದೇವಸ್ಥಾನದಿಂದ ಇಪ್ಪತ್ತು ಹೆಜ್ಜೆ ದೂರದಲ್ಲಿಯೇ ಹರಿಯುತ್ತಿದ್ದ ಹಳ್ಳದಲ್ಲಿ ವೆಂಕಣ್ಣನವರು ಕಾಲು ತೊಳೆದುು, ಸಂಧ್ಯಾವಂದನೆ ಮಾಡಿ ಮುಗಿಸಿದರು. ಅಲ್ಲಿಂದ ಅವರು ದೇವಸ್ಥಾನಕ್ಕೆ ಮರಳಿ ಬರುವ ವೇಳೆಗೆ ಒಂದು ಶುಭ್ರವಾದ ಹಿತ್ತಾಳೆಯ ಪಾತ್ರೆ ತುಂಬ ಸಕ್ಕರೆ ಬೆರೆಸಿದ ಘಮಘಮಿಸುವ ಹಸುವಿನ ಹಾಲನ್ನೂ, ಸೊಗಸಾದ ಒಂದು ಚಿಪ್ಪು ಬಾಳೆಹಣ್ಣನ್ನೂ ತಂದಿಟ್ಟುಕೊಂಡು ಕಾದಿದ್ದರು. ` ಈ ಬಡವನ ಮನೆಯಲ್ಲಿ ಊಟವನ್ನಂತೂ ಮಾಡುವಂತಿಲ್ಲ. ಈ ಹಾಲು-ಹಣ್ಣುಗಳನ್ನಾದರೂ ಸ್ವೀಕರಿಸಿ ನನ್ನ ಪುನೀತನನ್ನಾಗಿ ಮಾಡಬೇಕು. ಇಲ್ಲದಿದ್ದರೆ ಈ ಬಡವನ ಮನಸ್ಸಿಗೆ ಸಮಾಧಾನ ಆಗುವುದಿಲ್ಲ' ಎಂದು ಅಂಗಲಾಚಿ ಬೇಡಿಕೊಂಡ. ವೆಂಕಣ್ಣಯ್ಯನವರು ಆತನ ಪ್ರಾರ್ಥನೆಯನ್ನು ನಿರಾಕರಿಸಲಾಗದೆ, ಹಾಲು ಹಣ್ಣುಗಳನ್ನು ಆ ರಾಮದೂತನಿಗೆ ನೈವೇದ್ಯ ಮಾಡಿ, ಶ್ರೀರಾಮರಕ್ಪಾಮಂತ್ರದಿಂದ ಪುನೀತವಾಗಿದ್ದ ಆ ಹಣ್ಣುಗಳನ್ನು ತಿಂದು,ಹಾಲು ಕುಡಿದರು. ಅವೆರಡೂ ತುಂಬ ರುಚಿಯಾಗಿದ್ದವು.
ಶೇಕದಾರರು ಬಳಿಕ ಶಾನುಭೋೋಗನೊಡನೆ ಲೋಕಾಭಿರಾಮವಾಗಿ ಮಾತಾಡುತ್ತಾ, ಆ ಊರಿನ ಹೆಸರು ಹೊಸಹಳ್ಳಿಯೆಂದೂ, ಚಳ್ಳಕೆರೆ ತಾಲೂಕು ತಳುಕು ಹೋಬಳಿಗೆ ಸೇರಿದ ಗ್ರಾಮವೆಂದೂ, ಆ ಊರಿಗೆ ಶಾನುಭೋೋಗನಾದ ಆತನ ಹೆಸರು ತಿಮ್ಮಪ್ಪನೆಂದೂ ತಿಳಿದುಕೊಂಡರು. ಆತ ಶೇಕದಾರರನ್ನು ಕುರಿತು ` ಮಹಾಸ್ವಾಮಿ, ತಮ್ಮಂಥ ಹಿರಿಯರ ಆಶೀರ್ವಾದದಿಂದ ನನಗೆ ಯಾವ ತೊಂದರೆಯೂ ಇಲ್ಲ. ತಮ್ಮಂತಹ ಸತ್ಬ್ರಾಹ್ಮಣರ ಸೇವೆಯಿಂದ ನಾನು ಧನ್ಯನಾದೆ. ಇಲ್ಲಿಗೆ ಸಮೀಪದ ಹಳ್ಳಿಗಳು ಪರಶುರಾಮಪುರ ಹೋಬಳಿಗೆ ಸೇರಿದವು. ಅಲ್ಲಿಗೆ ತಾವು ಬಂದು ಹೋಗುವಾಗ ನಾನು ತಮ್ಮನ್ನು ಅನೇಕ ಸಲ ನೋಡಿದ್ದೇನೆ. ತಮ್ಮ ಗುರುತು ನನಗೆ ಚೆನ್ನಾಗಿಯೇ ಇದೆ' ಎಂದ ಹೊಗಳಿದ. ಆ ವೇಳೆಗೆ ರಾತ್ರಿ ಹತ್ತುಗಂಟೆಯಾಯಿತು. ಶಾನುಭೋಗ ತನ್ನ ಅತಿಥಿಯನ್ನು ಕುರಿತು `ಮಹಾಸ್ವಾಮಿ ತಾವಿನ್ನು ಮಲಗೋಣವಾಗಲಿ, ನಾನೂ ಮನೆಗೆ ಹೋಗುತ್ತೇನೆ' ಎಂದು ಅವರಿಗೆ ನಮಸ್ಕರಿಸಿ ಮೇಲೆದ್ದ.
ಆಗ ವೆಂಕಣ್ಣಯ್ಯನವರು `ತಿಮ್ಮಪ್ಪನವರೇ, ಇದು ಪರಸ್ಥಳ. ದೇವಸ್ಥಾನದ ಬಾಗಿಲು ಭದ್ರವಿರುವಂತೆ ಕಾಣುತ್ತಿಲ್ಲ. ಅಲ್ಲದೇ ಇದು ಊರ ಹೊರಗಿದೆ. ನನ್ನ ಹತ್ತಿರ ಈಗತಾನೇ ವಸೂಲಾದ ಭಾರೀ ಹಣವಿದೆ. ನಾನು ಹುಷಾರಾಗಿರುವುದು ಮೇಲು. ಇದು ನಾಳೆಯ ದಿನ ಖಜಾನೆಗೆ ಇರಸಾಲಾಗಬೇಕಾದ ಹಣ. ರಾತ್ರಿಯಲ್ಲಿ ಒಂಟಿಯಾಗಿರಬೇಕಾದ ನನ್ನ ಬಳಿ ಇಷ್ಟು ದೊಡ್ಡ ಮೊತ್ತ ಇರುವುದು ಸರಿಯಲ್ಲ. ಆದ್ದರಿಂದ ಈ ಹಣವನ್ನು ರಾತ್ರಿ ನಿಮ್ಮಲ್ಲೇ ಜೋಪಾನವಾಗಿಟ್ಟುಕೊಂಡಿದ್ದು, ಬೆಳಗೆರೆಗೆ ನಾನು ಹೊರಡುವ ಹೊತ್ತಿಗೆ ಹಿಂದಕ್ಕೆ ತಂದುಕೊಡಿ' ಎಂದು ಹೇಳಿ, ತಮ್ಮ ಸೊಂಟದಲ್ಲಿದ್ದ ಹಮ್ಮಿಣಿಯ್ನು ಬಿಚ್ಚಿ ತೆಗೆದು ಶಾನುಭೋಗರ ಕೈಲಿ ಕೊಟ್ಟರು. ಶಾನುಭೋಗ ತಿಮ್ಮಪ್ಪ ` ಅಗತ್ಯವಾಗಿ ಆಗಲಿ ಮಹಾಸ್ವಾಮಿ. ತಾವು ನಿಶ್ಚಿಂತೆಯಾಗಿ ನಿದ್ದೆ ಮಾಡೋಣವಾಗಲಿ' ಎಂದು ಹೇಳಿ ಹಣದ ಹಮ್ಮಿಣಿಯೊಂದಿಗೆ ತನ್ನ ಮನೆಗೆ ಹೋದ. ವೆಂಕಣ್ಣಯ್ಯನವರು ಹಾಯಾಗಿ ನಿದ್ರೆ ಹೋದರು.
ವೆಂಕಣ್ಣಯ್ಯನವರು ಮಾಮೂಲು ಪದ್ಧತಿಯಂತೆ ಪಂಚಪಂಚ ಉಷಃಕಾಲಕ್ಕೆದ್ದು ಹಾಸಿಗೆಯಲ್ಲಿ ಕುಳಿತು ಕಣ್ಮುಚ್ಚಿಕೊಂಡೇ ಪ್ರಾತಃಸ್ಮರಣೆಯನ್ನು ಮಾಡಿ ಮುಗಿಸಿದರು. ಆ ವೇಳೆಗೆ ಸಾಮಾನ್ಯವಾಗಿ ಕೋಳಿ ಕೂಗಬೇಕು. ನೇಗಿಲಯೋಗಿ ಎತ್ತುಗಳನ್ನಟ್ಟಿಕೊಂಡು ಹೊಲಗಳ ಹಾದಿ ಹಿಡಿಯಬೇಕು; ಹೆಣ್ಣುಗಳೆದ್ದು ಹಾಡುತ್ತಾ ರಾಗಿ ಬೀಸಬೇಕು, ಅಕ್ಕಿ ಕುಟ್ಟಬೇಕು, ಅಂಗಣಕ್ಕೆ ಸಗಣಿ ನೀರು ಹಾಕಬೇಕು. ದನಗಳಿಗೆ ಹುಲ್ಲು ಹಾಕಿ ಹಾಲು ಕರೆಯಬೇಕು. ಹಕ್ಕಿಗಳು ಮರಗಳ ಮೇಲೆ ಕುಳಿತು ಚಿಲಿಪಿಲಿಗುಟು್ಟತ್ತಿರಬೇಕು. ಆದರೆ ಅದೊಂದೂ ಅಲ್ಲಿ ಕಾಣಿಸಲಿಲ್ಲ. ಶೇಕದಾರರು ಅರ್ಧಂಟೆ ಕಾದರು. ಕೋಳಿ ಕೂಗಲಿಲ್ಲ. ಜನರ ಚಲನವಲನ ಇಲ್ಲ. ಬೆಳಕು ಹರಿಯುತ್ತಾ ಬಂದಂತೆ ತಾವು ಮಲಗಿದ್ದ ಹಾಸಿಗೆ ಕಾಣಿಸಲಿಲ್ಲ.ಅದಕ್ಕೆ ಬದಲಾಗಿ ಸೊಪ್ಪುಸದೆಗಳ ರಾಸು ಕಾಣಿಸಿತು. ಎದ್ದು ಗುಡಿಯ ಮುಂದಿನ ಕಟ್ಟೆಯ ಮೇಲೆ ನಿಂತು ನೋಡಿದರು.
ಅಲ್ಲೇನಿದೆ? ಮನೆಗಳೂ ಇಲ್ಲ, ಜನರೂ ಇಲ್ಲ. ಹರಕು ಮುರುಕು ಗೋಡೆಗಳು, ಅಸ್ತವ್ಯಸ್ತ ಬಿದ್ದಿರುವ ಕಲ್ಲುರಾಶಿ, ಮಣ್ಣಿನ ಗುಪ್ಪೆ. ಅವುಗಳ ನಡುವೆ ಬೆಳೆದಿರುವ ಕಾಡುಗಿಡಗಳು. ಅಲ್ಲಲ್ಲಿಯೇ ಹರಿದಾಡುತ್ತಿರುವ ಹುಳ ಹುಪ್ಪಟೆ. ಅದೊಂದು ಹಾಳೂರು.
ವೆಂಕಣ್ಣಯ್ಯನವರಿಗೆ ದಿಗ್ಭ್ರಮೆಯಾಯಿತು. ತಾವೆಂಥ ಅವಿವೇಕವನ್ನು ಮಾಡಿದ ಹಾಗಾಯಿತು. ಐದುನೂರು ರುಪಾಯಿಗಳ ದೊಡ್ಡ ಗಂಟನ್ನು ಶಾನುಭೋೋಗ ದೆವ್ವದ ಕೈಯಲ್ಲಿ ಕೊಟ್ಟುದಾಯಿತಲ್ಲ. ಅಷ್ಟು ದೊಡ್ಡ ಮೊತ್ತವನ್ನು ಮತ್ತೆ ಜೋಡಿಸುವುದು ಹೇಗೆ? ಯಾರು ಕೊಟ್ಟಾರು? ಎಲ್ಲಿಂದ ತರಬೇಕು? ಇರಸಾಲಿನ ಹಣ ಒಡನೆಯೇ ಪಾವತಿ ಆಗದಿದ್ದರೆ ತಮ್ಮ ಗತಿ ಏನು? ಸರ್ಕಾರ ತಮ್ಮನ್ನು ಸುಮ್ಮನೇ ಬಿಟ್ಟೀತೇ?
*****
ತ. ಸು. ಶಾಮರಾಯರು ಬರೆದ ` ಮೂರು ತಲೆಮಾರು' ಕೃತಿಯ ಆಯ್ದ ಅಧ್ಯಾಯದ ಮೊದಲ ಭಾಗ ಇದು. ಎಲ್ಲಾ ಪ್ರಶ್ನೆಗಳನ್ನೂ ಮರೆತು ಇದರ ರೋಚಕತೆಯನ್ನು ಅನುಭವಿಸಿ. ಮುಂದಿನ ಭಾಗ ನಾಳೆ. ಅಲ್ಲಿಯ ತನಕ ದೆವ್ವದ ನೆನಪು.
No comments:
Post a Comment