ಈ ಪ್ರಸಂಗ ಬೆಳಗೆರೆ ಕೃಷ್ಣಶಾಸ್ತ್ರಿಯವರ ಹಾಸ್ಯಪ್ರಜ್ಞೆಗೆ, ವಿನಯವಂತಿಕೆಗೆ ಮತ್ತು ಪ್ರೀತಿಗೆ ಸಾಕ್ಪಿ. ಒಂದು ಅಭಿನಂದನಾ ಸಮಾರಂಭದಲ್ಲಿ ಮಾತಾಡುತ್ತಾ ಕೃಷ್ಣಶಾಸ್ತ್ರಿಯವರು ಹೇಳಿದ್ದರಂತೆ;
`ನಾನೂ ಸುಬ್ಬಣ್ಣಿ ಒಟ್ಟಿಗೇ ಎಸ್ಸೆಸ್ಸೆಲ್ಸಿ ಪರೀಕ್ಪೆ ಕಟ್ಟಿದ್ವಿ. ಒಟ್ಟಿಗೆ ರಿಸಲ್ಟು ನೋಡಲು ಹೋಗಿದ್ದೆವು. ನನಗೆ ಮ್ಯಾಥಮೆಟಿಕ್ಸ್ ನಲ್ಲಿ 38 ನಂಬ್ ಬಂದು ಜಸ್ಟ್ ಪಾಸಾಗಿದ್ದೆ. ಸುಬ್ಬಣ್ಣಿಗೆ 16 ಮಾರ್ಕ್ ಬಂದಿತ್ತು' ಎಂದು ಹೇಳುತ್ತಿದ್ದಂತೆ ಸುಬ್ಬಣ್ಣ ಎದ್ದು ನಿಂತು ಜನರಿಗೆ ಕೈ ತೋರಿಸಿ `ಇವನು ಸುಳ್ಳು ಹೇಳ್ತಿದ್ದಾನೆ' ಎಂದ.
`ಹಾಗಾದ್ರೆ ನಿಜವನ್ನು ನೀನೇ ಹೇಳು' ಎಂದೆ.
`ನನಗೆ ಸೊನ್ನೆ ಬಂದಿತ್ತು' ಎಂದ. ಜನರೆಲ್ಲ ಕೇಕೆ ಹೊಡೆದು ನಕ್ಕರು.
ಕೊನೆಯಲ್ಲಿ ` ನಾನು ಸುಬ್ಬಣ್ಣಿ ಚಿಕ್ಕಂದಿನಲ್ಲಿ ನಮ್ಮ ಜಮೀನಿನಲ್ಲಿದ್ದ ಹುಣಸೇ ಮರ ಹತ್ತಿ ಮರಕೋತಿ ಆಟವಾಡುತ್ತಿದ್ದೆವು. ಆ ನೆನಪು ಈಗಲೂ ನನ್ನ ಕಣ್ಣಮುಂದಿದೆ. ಆದರೆ ಸುಬ್ಬಣ್ಣಿ ಬರ್ತಾ ಬರ್ತಾ ಮರವೇ ಆಗಿ ಬೆಳೆದುಬಿಟ್ಟ. ನಾನು ಕೋತಿಯಾಗಿ ಮರದಲ್ಲೇ ಉಳಿದಿದ್ದೀನಿ' ಎಂದು ಮಾತು ಮುಗಿಸಿದೆ.
ಇಲ್ಲಿ ಸುಬ್ಬಣ್ಣಿ ಅಂದರೆ ತ.ರಾ.ಸು.
Saturday, October 13, 2007
Subscribe to:
Post Comments (Atom)
4 comments:
Sir, This is really nice one...
ನಾಲ್ಕು ಸಾಲು ಲೇಖನವಾದರೂ, ಅರ್ಥ ವ್ಯಾಪ್ತಿ ಮಾತ್ರ ಸಮುದ್ರದಷ್ಟು ವಿಶಾಲ.ಚಿಂತನೆಗೆ ಹಚ್ಚಿದ ಬರವಣಿಗೆ.
ಧನ್ಯವಾದಗಳು.
jomon varghese.
http://jomon-malehani.blogspot.com/
jogi maneyali soori, natraj, mohan ella sigo haage aagiddhu thumbha santhosha
The great thing about Belagere Krishnashastry is he is so humble. One should appreciate the way he narrates his 'yaadein'.
Post a Comment