ಚಾರ್ಮಾಡಿ ಘಾಟಿಯಿಂದ
ಕೆ
ಳ
ಗೆ
ಇ
ಳಿ
ಯು
ತ್ತಾ
ಬಂದ ಹಾಗೆ ಸೆಕೆ.
ಕಡಲಿಗೆ ಅಗ್ನಿ ನಾಲಗೆ
ಗಾಳಿಗೆ ಬೆಂಕಿಬೆರಳು.
ಯಾವ ಘಾಟಿ ರಸ್ತೆ
ಇಳಿದರೂ
ನಡುಹಾದಿಯಾಚೆ
ಸುಡುಕೆಂಡ
ದ ಹಾಗೆಲ್ಲಾ
ರಿ
ಏ
ಒಳಗೊಳಗೆ ತಂಗಾಳಿ
ತೀಡಿ
ಅಂಗಾಂಗ ಚಂದನ
ಗಂಧಘಮಘಮ
ಪ್ರಸ್ತಭೂಮಿ
ಮಾತ್ರ
ಸದಾ
ಸಮಶೀತೋಷ್ಣವಲಯ.
ಮಧುಮಲೆಯ ತುತ್ತತುದಿಗೆ
ಏರಿ ನೋಡಿದರೆ
ಅದರಾಚೆ
ಕೈಗೆಟುಕುವಂತೆ
ಕ್ಷೀರಪಥ
ಎಲ್ಲವೂ
ಅಯೋಮಯ
Friday, June 13, 2008
Subscribe to:
Post Comments (Atom)
9 comments:
ಎಲ್ಲಿಂದೆಲ್ಲಿಗೋ ಹಾರುವ ಶಬ್ಧಗಳ ನಡುವೆಯೂ
ಟೆಕ್ನಿಕಲ್ ಟಚ್ಚಿದೆ..!
hats off
-g n mohan
ನಿಜ, ಕರಾವಳಿಯಲ್ಲಿ ವಿಪರೀತ ಸೆಖೆ ಇತ್ತು..ಆದ್ರೆ ಈಗ ಆ ಋತು ಸಂಹಾರವಾಗಿದೆ ;-)
ಈಗ ..
ಕೆಳಗಿಳಿಯುತ್ತ ಬಂದ ಹಾಗೆ..
ಮಳೆಯ ತುಂತುರ ಚಿವುಟು
ಕಡಲತ್ತ ಚಾಚುವ ಇಂದಷ್ಟೆ ಹುಟ್ಟಿದ
ಪುಟ್ಟ ತೊರೆಗಳೊನಪು..
ಗಾಳಿಯೊಡಲಲ್ಲೆಲ್ಲ
ಹನಿಯ ತಂಪು, ಮಣ್ಣ ಕಂಪು... :-)
ಜೋಗಿ ಸಾರ್..
ಪದ್ಯ ಚೆನ್ನಾಗಿದೆ..
ತುಂಬಾ ದಿನಗಳ ಹಿಂದೆ... ಲಂಕೇಶ್ ರೂಪಕ ಕವಿಗಳು ಸರಣಿಯಲ್ಲಿ ಹೀಗೆ ತಾಂತ್ರಿಕವಾಗಿ ಭಿನ್ನ ಪ್ರಯೋಗಗಳನ್ನು ಮಾಡಿದ್ದ ಕವಿಗಳನ್ನು ಪರಿಚಯಿಸಿದ್ದರು.ಅವರೆಲ್ಲಾ ಪದ್ಯದಲ್ಲೇ ಕಾರಂಜಿಯನ್ನು ಬರೆದಿದ್ದರು.
ಕನ್ನಡದಲ್ಲೀ ಇಂಥ ಪ್ರಯೋಗಗಳು ಆಗಿದ್ದಾವ?
ಏನೇ ಇರಲಿ.. ಜೋಗಿ ಜೋಳಿಗೆಯಲ್ಲಿ ಕಥೆಯಷ್ಟೇ ಅಲ್ಲ.. ಕವಿತೆಗಳೂ ಇವೆ ಎಂಬುದು ಸ್ಪಷ್ಟವಾಯಿತು.. ಮತ್ತಷ್ಟು ಪದ್ಯಗಳು ಹೊರಬರಲಿ...
ಇ
ಳಿ
ದು
ಬರಲಿ
ಹ... ರಿ... ದು ..
ಬರಲಿ...
-ಅಲೆಮಾರಿ
:) ಒಂಥರ ಮಜವಾಗಿದೆ! ತೀರಾ ವಿಮರ್ಶೆ ಮಾಡುವಷ್ಟೆಲ್ಲ ಗೊತ್ತಿಲ್ಲ ನಂಗೆ! ಖುಶಿಯಾಯ್ತು ಓದಿ.
:-o
ಓದಿ ತುಂಬ ಖುಶಿಯೆನಿಸಿತು.
ಘಟ್ಟ ಹತ್ತಿ ಕೆಳಗೆ ಇಳಿದ ಅನುಭವವೇ ಆಯ್ತು.
"ಮಲೆಯ ಮೇಲೇರಿದಾಗ
ಕೈಗೆಟುಕುವಂತೆಇರುವ ಕ್ಷೀರಪಥ" ದ ಭಾವಾಭಿವ್ಯಕ್ತಿ ತುಂಬ ಇಷ್ಟವಾಯ್ತು.
ಪ್ರೀತಿಯಿಂದ
ಸಿಂಧು
kavite bareda shaili tumbaa chennaagittu. naanobba hosa blogger, nannadu http://www.ini-dani.blogspot.com/ kannaDa mattu english'inalli. Odi vimarshisi.
Post a Comment