ಕುರ್ತಕೋಟಿ
ಕುರಿತು
ಪದ್ಯ ಬರೆಯಲು
ನನ್ನ ಷರತು;
ಕುಮಾರವ್ಯಾಸನ
ಹೊರತು
ಇತರ ಕವಿಗಳ
ಅವರು
ಮರೆತು
ಬಿಡಲಿ.
ಕುಕಾವ್ಯವೃಕ್ಷಕ್ಕೆ
ಅವರಾಗಲಿ
ಕೊಡಲಿ
ಕುರ್ತಕೋಟಿ
ಎಂಥ ಮೆಮರಿ!
ಟೇಪ್ ರಿಕಾರ್ಡ್
ಅನ್ ನೆಸಸರಿ
ಕುರ್ತಕೋಟಿ
ನಿಮಗಾರು ಸಾಟಿ?
ಕುರ್ತಕೋಟಿಯವರ `ಉರಿಯ ನಾಲಗೆ' ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ವೈಯನ್ಕೆ ಹೀಗೆ ಬರೆದಿದ್ದರು. ವೈಯನ್ಕೆಯವರ ಪ್ರಕಾರ ಕೀರ್ತಿಮನಿ ಅಂದರೆ ಲೇಖಕನ ಎರಡು ಬಹುಮುಖ್ಯ ಅಗತ್ಯಗಳು; ಕೀರ್ತಿ ಮತ್ತು ಮನಿ ಅಂದರೆ ಕ್ರೆಡಿಟ್ ಮತ್ತು ಕ್ಯಾಶ್. ಕೀರ್ತಿನಾಥ ಕುರ್ತಕೋಟಿಯವರು `ಆ ಮನಿ' ಬರೆದ ನಂತರ ವೈಯನ್ಕೆ ಅವರನ್ನು ಕೀರ್ತಿಮನಿ ಎಂದೇ ಕರೆಯುತ್ತಿದ್ದರು.
-2-
ಕೀರ್ತಿನಾಥ ಕುರ್ತಕೋಟಿಯವರನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅವರು ಬರೆದ ಕೃತಿಗಳ ಮೂಲಕವೇ ಪ್ರಕಟವಾಗಬೇಕಾದವರು ಅವರು. ಯಾಕೆಂದರೆ ಕುರ್ತಕೋಟಿಯವರನ್ನು ಹತ್ತಿರದಿಂದ ಕಂಡವರು ಕಡಿಮೆ. ಗೆಳೆಯರ ಗುಂಪಿನಲ್ಲಿ ಅವರು ಒಬ್ಬರಾಗಿದ್ದರೂ ಗುಂಪಿನಿಂದ ಹೊರಗೇ ಉಳಿಯುವುದರಲ್ಲೇ ಅವರ ಸಂತೋಷವಿತ್ತು. ಅವರ ಹತ್ತಿರ ಮಾತಾಡುವುದಕ್ಕಾಗಲೀ ಹಂಚಿಕೊಳ್ಳುವುದಕ್ಕಾಗಲೀ ಸಾಹಿತ್ಯೇತರ ಸಂಗತಿಗಳೇ ಇರಲಿಲ್ಲ ಎಂಬ ಭಯ ಅವರ ಓರಗೆಯ ಅನೇಕರನ್ನು ಕಾಡಿದಂತಿತ್ತು. ಅದಕ್ಕಿಂತ ಹೆಚ್ಚಾಗಿ ಕುರ್ತಕೋಟಿಯವರಿಗಿದ್ದ ಪಾಂಡಿತ್ಯ ಎಲ್ಲರನ್ನು ಮೌನವಾಗಿಸುತ್ತಿತ್ತೋ ಏನೋ? ಯಾವ ಬರಹಗಾರರೂ ಅವರ ಹತ್ತಿರ ಉಡಾಫೆಯಿಂದ ಮಾತಾಡುವುದು ಸಾಧ್ಯವಿರಲಿಲ್ಲ. ಕಾರಂತರ ಜೊತೆ ಮಾತಾಡುವವನ ಅಜ್ಞಾನ ಹೇಗೆ ಬಹುಬೇಗ ಬಯಲಾಗುತ್ತಿತ್ತೋ, ಕುರ್ತಕೋಟಿ ವಿಚಾರದಲ್ಲೂ ಅಷ್ಟೇ. ಹೀಗಾಗಿ ಅವರನ್ನು ತುಂಬ ಮೆಚ್ಚುತ್ತಿದ್ದವರೂ ಅವರನ್ನು ದೂರದಲ್ಲಿಟ್ಟಿದ್ದರು.
ಸಾಹಿತ್ಯದ ಎಲ್ಲ ಪ್ರಕಾರಗಳ ಬಗ್ಗೆ ಯಾವ ಪೂರ್ವಗ್ರಹಗಳನ್ನೂ ಇಟ್ಟುಕೊಳ್ಳದೇ ಬರೆದ ಕುರ್ತಕೋಟಿಯವರ ಬಗ್ಗೆ ಬಹುತೇಕ ಸಾಹಿತಿಗಳಿಗೊಂದು ಪೂರ್ವಗ್ರಹವಿತ್ತು. ಅದೆಂದರೆ; ಕುರ್ತಕೋಟಿ ಎಷ್ಟೇ ಉದಾರವಾಗಿದ್ದರೂ ಆಳದಲ್ಲಿ ಅವರು ಬೇಂದ್ರೆಗೆ ನಿಷ್ಠ. ಅದಕ್ಕಿಂತ ಆಳದಲ್ಲಿ ಕುಮಾರವ್ಯಾಸನಿಗೆ ನಿಷ್ಠ. ಹೀಗಾಗಿ ಕುರ್ತಕೋಟಿ ಅವರದ್ದು ಪತಿವ್ರತಾ ಪ್ರತಿಭೆ; ಒಬ್ಬನೇ ಒಬ್ಬ ಕವಿಗೆ ಅದು ನಿಷ್ಠವಾಗಿತ್ತು ಎಂದವರಿದ್ದರು. ಕುರ್ತಕೋಟಿಯವರ ಈ ಏಕನಿಷ್ಠೆಯ ಕುರಿತು ಸಾಹಿತ್ಯ ವಲಯದ ಅನೇಕರಲ್ಲಿ ಅಸಮಾಧಾನಗಳಿದ್ದವು. ಹೀಗಾಗಿಯೇ ಕುರ್ತಕೋಟಿಯವರಷ್ಟು ವಿಸ್ತಾರವಾದ ಓದಾಗಲೀ, ವಿಮರ್ಶಾಪ್ರತಿಭೆಯಾಗಲೀ ಇಲ್ಲದ ಜಿ. ಎಸ್. ಆಮೂರರನ್ನು ನವ್ಯ ಮತ್ತು ನವೋದಯದ ಸಾಹಿತ್ಯವಲಯ ಅಪಾರವಾಗಿ ಮೆಚ್ಚಿಕೊಂಡಿತು.
ಕುರ್ತಕೋಟಿ ಬರೆದ ವಿಮರ್ಶೆಗಳನ್ನು ಸಾಹಿತ್ಯ ಕೃತಿಯಷ್ಟೇ ಪ್ರೀತಿಯಿಂದ ಓದುವುದು ಸಾಧ್ಯವಿತ್ತು. ಒಂದು ಕೃತಿಯನ್ನು ಓದಿ ಅದಕ್ಕೊಂದು ಪರ್ಯಾವರಣವನ್ನು ದಕ್ಕಿಸಿಕೊಡುವ ಶಕ್ತಿ ಅವರ ಬರಹಗಳಿಗಿತ್ತು. ಕೆ. ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವಿತೆಗಳನ್ನು ಓದಿದ ನಂತರ ಇಲ್ಲಿಯ ಯಾವ ಅನುಭವಗಳೂ ರೂಪಕವಾಗಲು ಬಯಸುವುದಿಲ್ಲ ಎಂದು ಹೇಳುತ್ತಲೇ ಅದೇ ಲೋಕಪ್ರಿಯತೆಗೆ ಕಾರಣವೂ ಇರಬಹುದು ಎಂದು ಊಹಿಸುತ್ತದೆ ಕುರ್ತಕೋಟಿ ಪ್ರತಿಭೆ. ಅಂಥ ವಿಶ್ಲೇಷಣೆ ಅವರಿಗಷ್ಟೇ ಸಾಧ್ಯ. ಕಣವಿಯವರ ಕಾವ್ಯದಲ್ಲಿ ನಿಸರ್ಗ ಎಂದೂ ನಿರ್ಜನವಾಗುವುದಿಲ್ಲ ಎನ್ನುವುದನ್ನು ಗುರುತಿಸಿದವರೂ ಅವರೇ. ಸು. ರಂ. ಎಕ್ಕುಂಡಿಯವರ ಬಕುಲದ ಹೂವುಗಳ ಬಗ್ಗೆ ಬರೆಯುತ್ತಾ ಕವಿತೆಯ ವಿವರಗಳ ಕಾರ್ಯವಿಧಾನ ಬಹುಮುಖಿಯಾಗುವುದನ್ನೂ ಬಹುಮುಖಿಯಾದದ್ದು ಓಮ್ಮುಖವಾಗುವುದನ್ನೂ ಕುರ್ತಕೋಟಿ ತೋರಿಸಿದ್ದಾರೆ.
ಹಾಗೇ, ಅನಂತಮೂರ್ತಿಯವರ ಕತೆಯ ಶಿಲ್ಪ ಅವು ಹೇಳುವ ಸಂಗತಿಗಳ ಸಂವಹನದ ಅನುಕೂಲತೆಗಾಗಿಯೇ ನಿರ್ಮಾಣವಾದಂತಿರುತ್ತವೆ, ಆದರೆ ಕಲೆಗಾರಿಕೆಯಲ್ಲಿ ಅವು ಸಹಜವಾಗಿರುವಂತೆ ಕಾಣುತ್ತವೆ ಎಂದಿದ್ದಾರೆ ಕುರ್ತಕೋಟಿ. ಈ ನಿಲುವನ್ನು ಅವರು ಶಂಕರ ಮೊಕಾಶಿ ಪುಣೇಕರರ ಕಾದಂಬರಿಯ ಬಗ್ಗೆ ಬರೆಯುವಾಗ ಮತ್ತೊಂದು ಅರ್ಥದಲ್ಲಿ ಬಳಸುತ್ತಾರೆ. ಬೇಂದ್ರೆಯ ಒಂದು ಕವಿತೆಯನ್ನಿಟ್ಟುಕೊಂಡು ಕನಕದಾಸನಿಗೂ ಬೇಂದ್ರೆಗೂ ಇರುವ ಬೌದ್ಧಿಕ ಕೊಂಡಿಯನ್ನು ಕುರ್ತಕೋಟಿ ಕಂಡುಹಿಡಿಯುತ್ತಾರೆ.
-3-
ಕುರ್ತಕೋಟಿ ಧಾರವಾಡದ ಗೆಳೆಯರ ಗುಂಪಿನ ಬಗ್ಗೆ ಬರೆದಿದ್ದಾರೆ. ಯಾವುದನ್ನೂ ಬರೆದಿಟ್ಟುಕೊಳ್ಳದೇ ಎಲ್ಲವನ್ನೂ ನೆನಪಿಸಿಕೊಂಡು ಬರೆಯಬಲ್ಲ ಶಕ್ತಿ ಅವರಿಗಿತ್ತು. ಎಂಕೆ ಇಂದಿರಾರ ತುಂಗಭದ್ರಾ ಕಾದಂಬರಿಯನ್ನು ಅವರು ಪೂರ್ತಿಯಾಗಿ ಮರುಸೃಷ್ಟಿಸಿದವರು ಅನ್ನುವುದು ಅವರ ಬಗ್ಗೆ ಇರುವ ಅಸಂಖ್ಯಾತ ಪ್ರತೀತಿಗಳಲ್ಲಿ ಒಂದು. ರಾವ್ ಬಹದ್ದೂರರ ಗ್ರಾಮಾಯಣವನ್ನೂ ಕುರ್ತಕೋಟಿ ತಿದ್ದಿ ಬರೆದದ್ದರಿಂದಲೇ ಅಷ್ಟು ಸೊಗಸಾಗಿ ಮೂಡಿ ಬಂದಿದೆ ಅನ್ನುವುದು ಅಂಥದ್ದೆ ಇನ್ನೊಂದು ಕತೆ. ಅವನ್ನೆಲ್ಲ ಕುರ್ತಕೋಟಿ ಎಂದೂ ಹೇಳಿಕೊಂಡದ್ದಿಲ್ಲ. ಇನ್ನೊಬ್ಬರ ಖ್ಯಾತಿಯಲ್ಲಿ ಅವರೆಂದೂ ಪಾಲು ಬೇಡಿದವರೂ ಅಲ್ಲ.
ಬೇಂದ್ರೆಯವರೂ ಅವರ ಖಾಸಾ ಗೆಳೆಯರೂ ಇದ್ದ ಗೆಳೆಯರ ಗುಂಪಿನ ಬಗ್ಗೆ, ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಕುರ್ತಕೋಟಿ ಬರೆದಿದ್ದಾರೆ. ಮನೋಹರ ಗ್ರಂಥಮಾಲೆಗಾಗಿ ಅವರು ಸಂಪಾದಿಸಿದ ನಡೆದು ಬಂದ ದಾರಿ ಮತ್ತು ಅದಕ್ಕೆ ಬರೆದ ಪ್ರಸ್ತಾವನೆಗಳು, ಪುಟಬಂಗಾರಕ್ಕೆ ಬರೆದ ಮುನ್ನುಡಿಗಳೂ ಸಾಕಷ್ಟು ವಿದ್ವತ್ಪೂರ್ಣವಾಗಿವೆ.
ಕುರ್ತಕೋಟಿಯವರನ್ನು ನಾವು ಇಷ್ಟಪಡಬೇಕಾದದ್ದು ಕೃತಿವಿಮರ್ಶೆಗಿಂತ ಹೆಚ್ಚಾಗಿ ಸಂಸ್ಕೃತಿ ವಿಮರ್ಶೆಗೆ. ಇವತ್ತು ಕೃತಿ ವಿಮರ್ಶೆಯ ಹೆಸರಲ್ಲಿ ಪ್ರಬಂಧಗಳೂ ಸೋಷಿಯಾಲಜಿಯ ಪಾಠಗಳೂ, ಸಂವಾದಗಳೂ ಪ್ರಕಟವಾಗುತ್ತಿವೆ. ಡಿ. ಆರ್. ನಾಗರಾಜರ ಸಂಸ್ಕೃತಿ ವಿಮರ್ಶೆಯನ್ನು ಹೊರತು ಪಡಿಸಿದರೆ ಅಷ್ಟು ಒಳನೋಟಗಳುಳ್ಳ ಟಿಪ್ಪಣಿಗಳನ್ನು ಮತ್ಯಾರೂ ಬರೆದಿಲ್ಲ. ಉಳಿದವರು ಬರೆಯುತ್ತಿರುವ ನೆಲೆಗಟ್ಟನ್ನೂ ಅವರು ಕಂಡುಕೊಂಡ ಸ್ಪೂರ್ತಿಯ ಮೂಲವನ್ನೂ ನಾವು ಸುಲಭವಾಗಿ ಹುಡುಕಿಬಿಡಬಹುದು. ಎಡ್ವರ್ಡ್ ಸೇಡ್ ನ ಓರಿಯಂಟಲಿಸಮ್ಮಿನಿಂದ ಹಿಡಿದು ಕೀಥ್ ಥಾಮಸ್ಸನ ರಿಲಿಜಿಯ್ ಅಂಡ್ ಡಿಕ್ಲೈನ್ ಆಫ್ ಮ್ಯಾಜಿಕ್ ತನಕ ಪಾಶ್ಚಾತ್ಯರಿಂದ ಪ್ರತಿಯೊಬ್ಬರೂ ಎಷ್ಟೆಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ ಅನ್ನುವುದನ್ನು ತೋರಿಸಬಹುದು. ಹಾಗೆ ನೋಡಿದರೆ ನಲುವತ್ತು ವರುಷಗಳ ಹಿಂದೆ ಅನಂತಮೂರ್ತಿ ಬರೆದ ` ಇಂಗ್ಲಿಶ್ ಬ್ರಾಹ್ಮಣ ಕನ್ನಡ ಶೂದ್ರ' ಕೂಡ ಪರೋಕ್ಪವಾಗಿ ಪ್ರೇರಣೆ ಪಡಕೊಂಡ ಬರಹವೇ ಆಗಿದೆ.
ಆದರೆ, ಕುರ್ತಕೋಟಿಯವರ `ಮಜ್ಜಿಗೆ ರಾಮಾಯಣ'ದಂಥ ಲೇಖನಗಳು ಸ್ವಭಾವತಃ ಇಂಥ ಯಾವ ಬಾಹ್ಯಪ್ರೇರಣೆಗಳೂ ಇಲ್ಲದ ಬರಹ. ಅದು ಹೀಗೆ ಶುರುವಾಗುತ್ತದೆ;
ಕುರಿತು
ಪದ್ಯ ಬರೆಯಲು
ನನ್ನ ಷರತು;
ಕುಮಾರವ್ಯಾಸನ
ಹೊರತು
ಇತರ ಕವಿಗಳ
ಅವರು
ಮರೆತು
ಬಿಡಲಿ.
ಕುಕಾವ್ಯವೃಕ್ಷಕ್ಕೆ
ಅವರಾಗಲಿ
ಕೊಡಲಿ
ಕುರ್ತಕೋಟಿ
ಎಂಥ ಮೆಮರಿ!
ಟೇಪ್ ರಿಕಾರ್ಡ್
ಅನ್ ನೆಸಸರಿ
ಕುರ್ತಕೋಟಿ
ನಿಮಗಾರು ಸಾಟಿ?
ಕುರ್ತಕೋಟಿಯವರ `ಉರಿಯ ನಾಲಗೆ' ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ವೈಯನ್ಕೆ ಹೀಗೆ ಬರೆದಿದ್ದರು. ವೈಯನ್ಕೆಯವರ ಪ್ರಕಾರ ಕೀರ್ತಿಮನಿ ಅಂದರೆ ಲೇಖಕನ ಎರಡು ಬಹುಮುಖ್ಯ ಅಗತ್ಯಗಳು; ಕೀರ್ತಿ ಮತ್ತು ಮನಿ ಅಂದರೆ ಕ್ರೆಡಿಟ್ ಮತ್ತು ಕ್ಯಾಶ್. ಕೀರ್ತಿನಾಥ ಕುರ್ತಕೋಟಿಯವರು `ಆ ಮನಿ' ಬರೆದ ನಂತರ ವೈಯನ್ಕೆ ಅವರನ್ನು ಕೀರ್ತಿಮನಿ ಎಂದೇ ಕರೆಯುತ್ತಿದ್ದರು.
-2-
ಕೀರ್ತಿನಾಥ ಕುರ್ತಕೋಟಿಯವರನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅವರು ಬರೆದ ಕೃತಿಗಳ ಮೂಲಕವೇ ಪ್ರಕಟವಾಗಬೇಕಾದವರು ಅವರು. ಯಾಕೆಂದರೆ ಕುರ್ತಕೋಟಿಯವರನ್ನು ಹತ್ತಿರದಿಂದ ಕಂಡವರು ಕಡಿಮೆ. ಗೆಳೆಯರ ಗುಂಪಿನಲ್ಲಿ ಅವರು ಒಬ್ಬರಾಗಿದ್ದರೂ ಗುಂಪಿನಿಂದ ಹೊರಗೇ ಉಳಿಯುವುದರಲ್ಲೇ ಅವರ ಸಂತೋಷವಿತ್ತು. ಅವರ ಹತ್ತಿರ ಮಾತಾಡುವುದಕ್ಕಾಗಲೀ ಹಂಚಿಕೊಳ್ಳುವುದಕ್ಕಾಗಲೀ ಸಾಹಿತ್ಯೇತರ ಸಂಗತಿಗಳೇ ಇರಲಿಲ್ಲ ಎಂಬ ಭಯ ಅವರ ಓರಗೆಯ ಅನೇಕರನ್ನು ಕಾಡಿದಂತಿತ್ತು. ಅದಕ್ಕಿಂತ ಹೆಚ್ಚಾಗಿ ಕುರ್ತಕೋಟಿಯವರಿಗಿದ್ದ ಪಾಂಡಿತ್ಯ ಎಲ್ಲರನ್ನು ಮೌನವಾಗಿಸುತ್ತಿತ್ತೋ ಏನೋ? ಯಾವ ಬರಹಗಾರರೂ ಅವರ ಹತ್ತಿರ ಉಡಾಫೆಯಿಂದ ಮಾತಾಡುವುದು ಸಾಧ್ಯವಿರಲಿಲ್ಲ. ಕಾರಂತರ ಜೊತೆ ಮಾತಾಡುವವನ ಅಜ್ಞಾನ ಹೇಗೆ ಬಹುಬೇಗ ಬಯಲಾಗುತ್ತಿತ್ತೋ, ಕುರ್ತಕೋಟಿ ವಿಚಾರದಲ್ಲೂ ಅಷ್ಟೇ. ಹೀಗಾಗಿ ಅವರನ್ನು ತುಂಬ ಮೆಚ್ಚುತ್ತಿದ್ದವರೂ ಅವರನ್ನು ದೂರದಲ್ಲಿಟ್ಟಿದ್ದರು.
ಸಾಹಿತ್ಯದ ಎಲ್ಲ ಪ್ರಕಾರಗಳ ಬಗ್ಗೆ ಯಾವ ಪೂರ್ವಗ್ರಹಗಳನ್ನೂ ಇಟ್ಟುಕೊಳ್ಳದೇ ಬರೆದ ಕುರ್ತಕೋಟಿಯವರ ಬಗ್ಗೆ ಬಹುತೇಕ ಸಾಹಿತಿಗಳಿಗೊಂದು ಪೂರ್ವಗ್ರಹವಿತ್ತು. ಅದೆಂದರೆ; ಕುರ್ತಕೋಟಿ ಎಷ್ಟೇ ಉದಾರವಾಗಿದ್ದರೂ ಆಳದಲ್ಲಿ ಅವರು ಬೇಂದ್ರೆಗೆ ನಿಷ್ಠ. ಅದಕ್ಕಿಂತ ಆಳದಲ್ಲಿ ಕುಮಾರವ್ಯಾಸನಿಗೆ ನಿಷ್ಠ. ಹೀಗಾಗಿ ಕುರ್ತಕೋಟಿ ಅವರದ್ದು ಪತಿವ್ರತಾ ಪ್ರತಿಭೆ; ಒಬ್ಬನೇ ಒಬ್ಬ ಕವಿಗೆ ಅದು ನಿಷ್ಠವಾಗಿತ್ತು ಎಂದವರಿದ್ದರು. ಕುರ್ತಕೋಟಿಯವರ ಈ ಏಕನಿಷ್ಠೆಯ ಕುರಿತು ಸಾಹಿತ್ಯ ವಲಯದ ಅನೇಕರಲ್ಲಿ ಅಸಮಾಧಾನಗಳಿದ್ದವು. ಹೀಗಾಗಿಯೇ ಕುರ್ತಕೋಟಿಯವರಷ್ಟು ವಿಸ್ತಾರವಾದ ಓದಾಗಲೀ, ವಿಮರ್ಶಾಪ್ರತಿಭೆಯಾಗಲೀ ಇಲ್ಲದ ಜಿ. ಎಸ್. ಆಮೂರರನ್ನು ನವ್ಯ ಮತ್ತು ನವೋದಯದ ಸಾಹಿತ್ಯವಲಯ ಅಪಾರವಾಗಿ ಮೆಚ್ಚಿಕೊಂಡಿತು.
ಕುರ್ತಕೋಟಿ ಬರೆದ ವಿಮರ್ಶೆಗಳನ್ನು ಸಾಹಿತ್ಯ ಕೃತಿಯಷ್ಟೇ ಪ್ರೀತಿಯಿಂದ ಓದುವುದು ಸಾಧ್ಯವಿತ್ತು. ಒಂದು ಕೃತಿಯನ್ನು ಓದಿ ಅದಕ್ಕೊಂದು ಪರ್ಯಾವರಣವನ್ನು ದಕ್ಕಿಸಿಕೊಡುವ ಶಕ್ತಿ ಅವರ ಬರಹಗಳಿಗಿತ್ತು. ಕೆ. ಎಸ್. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವಿತೆಗಳನ್ನು ಓದಿದ ನಂತರ ಇಲ್ಲಿಯ ಯಾವ ಅನುಭವಗಳೂ ರೂಪಕವಾಗಲು ಬಯಸುವುದಿಲ್ಲ ಎಂದು ಹೇಳುತ್ತಲೇ ಅದೇ ಲೋಕಪ್ರಿಯತೆಗೆ ಕಾರಣವೂ ಇರಬಹುದು ಎಂದು ಊಹಿಸುತ್ತದೆ ಕುರ್ತಕೋಟಿ ಪ್ರತಿಭೆ. ಅಂಥ ವಿಶ್ಲೇಷಣೆ ಅವರಿಗಷ್ಟೇ ಸಾಧ್ಯ. ಕಣವಿಯವರ ಕಾವ್ಯದಲ್ಲಿ ನಿಸರ್ಗ ಎಂದೂ ನಿರ್ಜನವಾಗುವುದಿಲ್ಲ ಎನ್ನುವುದನ್ನು ಗುರುತಿಸಿದವರೂ ಅವರೇ. ಸು. ರಂ. ಎಕ್ಕುಂಡಿಯವರ ಬಕುಲದ ಹೂವುಗಳ ಬಗ್ಗೆ ಬರೆಯುತ್ತಾ ಕವಿತೆಯ ವಿವರಗಳ ಕಾರ್ಯವಿಧಾನ ಬಹುಮುಖಿಯಾಗುವುದನ್ನೂ ಬಹುಮುಖಿಯಾದದ್ದು ಓಮ್ಮುಖವಾಗುವುದನ್ನೂ ಕುರ್ತಕೋಟಿ ತೋರಿಸಿದ್ದಾರೆ.
ಹಾಗೇ, ಅನಂತಮೂರ್ತಿಯವರ ಕತೆಯ ಶಿಲ್ಪ ಅವು ಹೇಳುವ ಸಂಗತಿಗಳ ಸಂವಹನದ ಅನುಕೂಲತೆಗಾಗಿಯೇ ನಿರ್ಮಾಣವಾದಂತಿರುತ್ತವೆ, ಆದರೆ ಕಲೆಗಾರಿಕೆಯಲ್ಲಿ ಅವು ಸಹಜವಾಗಿರುವಂತೆ ಕಾಣುತ್ತವೆ ಎಂದಿದ್ದಾರೆ ಕುರ್ತಕೋಟಿ. ಈ ನಿಲುವನ್ನು ಅವರು ಶಂಕರ ಮೊಕಾಶಿ ಪುಣೇಕರರ ಕಾದಂಬರಿಯ ಬಗ್ಗೆ ಬರೆಯುವಾಗ ಮತ್ತೊಂದು ಅರ್ಥದಲ್ಲಿ ಬಳಸುತ್ತಾರೆ. ಬೇಂದ್ರೆಯ ಒಂದು ಕವಿತೆಯನ್ನಿಟ್ಟುಕೊಂಡು ಕನಕದಾಸನಿಗೂ ಬೇಂದ್ರೆಗೂ ಇರುವ ಬೌದ್ಧಿಕ ಕೊಂಡಿಯನ್ನು ಕುರ್ತಕೋಟಿ ಕಂಡುಹಿಡಿಯುತ್ತಾರೆ.
-3-
ಕುರ್ತಕೋಟಿ ಧಾರವಾಡದ ಗೆಳೆಯರ ಗುಂಪಿನ ಬಗ್ಗೆ ಬರೆದಿದ್ದಾರೆ. ಯಾವುದನ್ನೂ ಬರೆದಿಟ್ಟುಕೊಳ್ಳದೇ ಎಲ್ಲವನ್ನೂ ನೆನಪಿಸಿಕೊಂಡು ಬರೆಯಬಲ್ಲ ಶಕ್ತಿ ಅವರಿಗಿತ್ತು. ಎಂಕೆ ಇಂದಿರಾರ ತುಂಗಭದ್ರಾ ಕಾದಂಬರಿಯನ್ನು ಅವರು ಪೂರ್ತಿಯಾಗಿ ಮರುಸೃಷ್ಟಿಸಿದವರು ಅನ್ನುವುದು ಅವರ ಬಗ್ಗೆ ಇರುವ ಅಸಂಖ್ಯಾತ ಪ್ರತೀತಿಗಳಲ್ಲಿ ಒಂದು. ರಾವ್ ಬಹದ್ದೂರರ ಗ್ರಾಮಾಯಣವನ್ನೂ ಕುರ್ತಕೋಟಿ ತಿದ್ದಿ ಬರೆದದ್ದರಿಂದಲೇ ಅಷ್ಟು ಸೊಗಸಾಗಿ ಮೂಡಿ ಬಂದಿದೆ ಅನ್ನುವುದು ಅಂಥದ್ದೆ ಇನ್ನೊಂದು ಕತೆ. ಅವನ್ನೆಲ್ಲ ಕುರ್ತಕೋಟಿ ಎಂದೂ ಹೇಳಿಕೊಂಡದ್ದಿಲ್ಲ. ಇನ್ನೊಬ್ಬರ ಖ್ಯಾತಿಯಲ್ಲಿ ಅವರೆಂದೂ ಪಾಲು ಬೇಡಿದವರೂ ಅಲ್ಲ.
ಬೇಂದ್ರೆಯವರೂ ಅವರ ಖಾಸಾ ಗೆಳೆಯರೂ ಇದ್ದ ಗೆಳೆಯರ ಗುಂಪಿನ ಬಗ್ಗೆ, ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಕುರ್ತಕೋಟಿ ಬರೆದಿದ್ದಾರೆ. ಮನೋಹರ ಗ್ರಂಥಮಾಲೆಗಾಗಿ ಅವರು ಸಂಪಾದಿಸಿದ ನಡೆದು ಬಂದ ದಾರಿ ಮತ್ತು ಅದಕ್ಕೆ ಬರೆದ ಪ್ರಸ್ತಾವನೆಗಳು, ಪುಟಬಂಗಾರಕ್ಕೆ ಬರೆದ ಮುನ್ನುಡಿಗಳೂ ಸಾಕಷ್ಟು ವಿದ್ವತ್ಪೂರ್ಣವಾಗಿವೆ.
ಕುರ್ತಕೋಟಿಯವರನ್ನು ನಾವು ಇಷ್ಟಪಡಬೇಕಾದದ್ದು ಕೃತಿವಿಮರ್ಶೆಗಿಂತ ಹೆಚ್ಚಾಗಿ ಸಂಸ್ಕೃತಿ ವಿಮರ್ಶೆಗೆ. ಇವತ್ತು ಕೃತಿ ವಿಮರ್ಶೆಯ ಹೆಸರಲ್ಲಿ ಪ್ರಬಂಧಗಳೂ ಸೋಷಿಯಾಲಜಿಯ ಪಾಠಗಳೂ, ಸಂವಾದಗಳೂ ಪ್ರಕಟವಾಗುತ್ತಿವೆ. ಡಿ. ಆರ್. ನಾಗರಾಜರ ಸಂಸ್ಕೃತಿ ವಿಮರ್ಶೆಯನ್ನು ಹೊರತು ಪಡಿಸಿದರೆ ಅಷ್ಟು ಒಳನೋಟಗಳುಳ್ಳ ಟಿಪ್ಪಣಿಗಳನ್ನು ಮತ್ಯಾರೂ ಬರೆದಿಲ್ಲ. ಉಳಿದವರು ಬರೆಯುತ್ತಿರುವ ನೆಲೆಗಟ್ಟನ್ನೂ ಅವರು ಕಂಡುಕೊಂಡ ಸ್ಪೂರ್ತಿಯ ಮೂಲವನ್ನೂ ನಾವು ಸುಲಭವಾಗಿ ಹುಡುಕಿಬಿಡಬಹುದು. ಎಡ್ವರ್ಡ್ ಸೇಡ್ ನ ಓರಿಯಂಟಲಿಸಮ್ಮಿನಿಂದ ಹಿಡಿದು ಕೀಥ್ ಥಾಮಸ್ಸನ ರಿಲಿಜಿಯ್ ಅಂಡ್ ಡಿಕ್ಲೈನ್ ಆಫ್ ಮ್ಯಾಜಿಕ್ ತನಕ ಪಾಶ್ಚಾತ್ಯರಿಂದ ಪ್ರತಿಯೊಬ್ಬರೂ ಎಷ್ಟೆಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ ಅನ್ನುವುದನ್ನು ತೋರಿಸಬಹುದು. ಹಾಗೆ ನೋಡಿದರೆ ನಲುವತ್ತು ವರುಷಗಳ ಹಿಂದೆ ಅನಂತಮೂರ್ತಿ ಬರೆದ ` ಇಂಗ್ಲಿಶ್ ಬ್ರಾಹ್ಮಣ ಕನ್ನಡ ಶೂದ್ರ' ಕೂಡ ಪರೋಕ್ಪವಾಗಿ ಪ್ರೇರಣೆ ಪಡಕೊಂಡ ಬರಹವೇ ಆಗಿದೆ.
ಆದರೆ, ಕುರ್ತಕೋಟಿಯವರ `ಮಜ್ಜಿಗೆ ರಾಮಾಯಣ'ದಂಥ ಲೇಖನಗಳು ಸ್ವಭಾವತಃ ಇಂಥ ಯಾವ ಬಾಹ್ಯಪ್ರೇರಣೆಗಳೂ ಇಲ್ಲದ ಬರಹ. ಅದು ಹೀಗೆ ಶುರುವಾಗುತ್ತದೆ;
ಆ ದೌ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ.
ಇದು ರಾಮಾಯಣದ ಕತೆಯನ್ನು ಸಂಗ್ರಹವಾಗಿ ಹೇಳುವ ಪದ್ಯ ಎನ್ನುತ್ತಲೇ ಕುರ್ತಕೋಟಿ ಇದರ ಹಿಂದಿರುವ ಒಂದು ಕತೆಯನ್ನೂ ವಿವರಿಸುತ್ತಾರೆ.
ಅದು ಹೀಗಿದೆ;
ಒಬ್ಬ ಬ್ರಾಹ್ಮಣ ಒಬ್ಬ ಮುದುಕಿಯ ಮನೆಗೆ ಹೋಗಿ ಮಜ್ಜಿಗೆಯನ್ನು ಕೇಳಿದನಂತೆ. ಅವಳಲ್ಲಿ ಮಜ್ಜಿಗೆ ಇತ್ತು. ಆದರೆ ಯಾರೋ ಕೇಳಿದರೆಂದು ಹಾಗೆಯೇ ಕೊಡಲು ಮನಸ್ಸಿರಲಿಲ್ಲ. ಅವನಿಂದ ಏನಾದರೂ ಕೆಲಸವಾದರೆ ಕೊಡುತ್ತೇನೆ ಎಂದುಕೊಂಡು ರಾಮಾಯಣದ ಕತೆ ಹೇಳುವಂತೆ ಹೇಳಿದಳಂತೆ. ಅವನು ಈ ಪದ್ಯವನ್ನು ಹೇಳಿದನಂತೆ. ರಾಮಾಯಣದ ಕತೆ ತುಂಬ ಚಿಕ್ಕದಾಯಿತು ಎಂದಿದ್ದಕ್ಕೆ ಅವನು ಮಜ್ಜಿಗೆಗೆ ತಕ್ಕ ರಾಮಾಯಣ ಎಂದನಂತೆ.
ಕುರ್ತಕೋಟಿ ಬರೆಯುತ್ತಾರೆ;
`ಒಂದು ಕಾವ್ಯಕೃತಿ ಮತ್ತು ಅದು ಹುಟ್ಟಿಬಂದು ಪ್ರಯೋಜನವಾಗಬೇಕಾದ ಸಮಾಜ- ಇವುಗಳ ಸಂಬಂಧವನ್ನು ಈ ಸಂಗತಿಯ ಮೂಲಕ ಅರಿಯಬಹುದಾಗಿದೆ. ಆರುಕಾಂಡಗಳಲ್ಲಿ ವಿಸ್ತಾರವಾಗಿ ಹಬ್ಬಿದ್ದ ರಾಮಾಯಣ ಮಹಾಕಾವ್ಯದ ಪ್ರಯೋಜನವನ್ನು ಸಮಕಾಲೀನ ಸಮಾಜ ಯಾವ ರೀತಿಯಲ್ಲಿ ಪಡಕೊಂಡಿತು ಎಂಬುದರ ಬಗ್ಗೆ ದಾಖಲೆಗಳು ನಮಗೆ ದೊರೆತಿಲ್ಲ. ಉತ್ತರಕಾಂಡದಲ್ಲಿ ಸ್ವತಃ ರಾಮನೇ ರಾಮಾಯಣವನ್ನು ಲವಕುಶರ ಬಾಯಿಯಿಂದ ಕೇಳುತ್ತಾನೆ. ರಾಮ ತನ್ನ ಮಕ್ಕಳೊಂದಿಗೆ ಪುನರ್ಮಿಲನವನ್ನು ಪಡೆದದ್ದು ರಾಮಾಯಣ ಕಾವ್ಯದ ಮೂಲಕವಾಗಿಯೇ ಎಂಬುದು ನಮಗೆ ಅದೇ ಕಾವ್ಯದಿಂದ ಗೊತ್ತಾಗುತ್ತದೆ. ರಾಮಾಯಣದ ಕತೆಯನ್ನು ಸ್ವತಃ ರಾಮನೇ ಕೇಳುವ ಪ್ರಸಂಗ ಅನೇಕ ರೀತಿಯಲ್ಲಿ ಅರ್ಥಪೂರ್ಣವಾಗಿದೆ. ರಾಮಾಯಣದ ಕತೆಗಾರನಂತೆ ರಾಮಾಯಣದ ಶ್ರೋತೃವೂ ಕತೆಯ ಮಹತ್ವದ ಅಂಗವಾಗುತ್ತಾನೆ. ವಾಲ್ಮೀಕಿ ಮತ್ತು ರಾಮರ ನಡುವೆ ರಾಮಾಯಣದ ಕತೆ ಇದೆ. ರಾಮ ರಾಮಯಣದ ನಾಯಕನೂ ಹೌದು, ಆ ಕತೆಯ ಮೊದಲ ಶ್ರೋತಾರನೂ ಹೌದು.'
ಮೇಲೆ ಹೇಳಿದಂತೆಯೇ ನಾಲ್ಕು ಚರಣಗಳ ಒಂದು ಶ್ಲೋಕದಲ್ಲಿ ಮಹಾಭಾರತವನ್ನೂ ಹೇಳುವುದುಂಟು. ಕುರ್ತಕೋಟಿಯವರ ಮಜ್ಜಿಗೆ ರಾಮಾಯಣದ ವಿಶ್ಲೇಷಣೆಯನ್ನು ಇದಕ್ಕೂ ವಿಸ್ತರಿಸಬಹುದಾಗಿದೆ. ಹೀಗೆ ರಾಮಾಯಣದ ಬಗ್ಗೆ ಅವರು ಬರೆದಿದ್ದನ್ನು ಓದಿದಾಗ ಮಹಾಭಾರತದ ಒಂದು ಶ್ಲೋಕ ನೆನಪಾಗುವಂತೆ ಮಾಡಬಲ್ಲ ಶಕ್ತಿ ಕುರ್ತಕೋಟಿಯವರ ಬರಹಗಳಿಗಿತ್ತು.
ಈಗ ಆ ಮಹಾಭಾರತದ ಕುರಿತ ಶ್ಲೋಕ ನೋಡಿ. ಎರಡಕ್ಕೂ ಇರುವ ಸಾಮ್ಯ ಗಮನಿಸಿ;
ಆ ದೌ ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ.
-4-
ಕುರ್ತಕೋಟಿಯವರ ಖಾಸಗಿ ಜೀವನದ ವಿವರಗಳು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರೊಬ್ಬರೇ ಅಲ್ಲ, ನಮ್ಮ ಬಹುತೇಕ ವಿಮರ್ಶಕರು ಏನಾಗಿದ್ದರು, ಹೇಗೆ ಜೀವನೋಪಾಯ ಸಾಗುತ್ತಿತ್ತು. ಅವರ ಗೆಳೆಯರು ಯಾರಿದ್ದರು? ಮುಂತಾದ ಪ್ರಶ್ನೆಗಳು ಹಾಗೇ ಉಳಕೊಂಡಿವೆ. ವರುಷಗಳ ಕೆಳಗೆ ಕುರ್ತಕೋಟಿಯವರು ಪತ್ನಿಸಮೇತ ನಿರ್ಗಮಿಸಿದಾಗ, ಶಂಬಾಜೋಷಿಯವರೂ ಹೀಗೆಯೇ ದಂಪತಿಸಮೇತರಾಗಿ ನಡೆದುಹೋಗಿದ್ದನ್ನು ಅನೇಕರು ಜ್ಞಾಪಿಸಿಕೊಂಡಿದ್ದರು. ಶಂಬಾ ತೀರಿಕೊಂಡಾಗ ಕುರ್ತಕೋಟಿಯವರೇ ಒಂದು ಲೇಖನ ಬರೆದಿದ್ದರು ಅನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಅದು ಹೀಗೆ ಕೊನೆಯಾಗುತ್ತದೆ;
`ಶಂಬಾ ಒಬ್ಬರೇ ತೀರಿಕೊಳ್ಳಲಿಲ್ಲ. ಅವರ ಧರ್ಮಪತ್ನಿ ಪಾರ್ವತೀಬಾಯಿ 10 ದಿನ ಮೊದಲೇ ಕೋಮಾದ ಸ್ಥಿತಿಯಲ್ಲಿದ್ದರು. ಶಂಬಾ ತೀರಿಕೊಂಡು ಹನ್ನೆರಡು ತಾಸುಗಳು ಕಳೆದ ಮೇಲೆ ಅವರೂ ತೀರಿಕೊಂಡರು. ಶಂಬಾ ಈ ವಿಷಯದಲ್ಲಿ ಬಹಳ ಪುಣ್ಯವಂತರು. ಹೆಂಡತಿ, ಅವರು ಸತ್ತ ಮೇಲೂ ಅವರ ಕೈ ಬಿಡಲಿಲ್ಲ. ಇದೂ ಒಂದು ಪುರಾಣಕತೆ.'
ಕುರ್ತಕೋಟಿಯವರ ಧರ್ಮಪತ್ನಿ ಸರಸ್ವತಿಯವರೂ ಪುಣ್ಯವಂತರು. ಅವರು ತೀರಿಕೊಂಡ ಮೇಲೂ ಕುರ್ತಕೋಟಿಯವರು ಅವರ ಕೈಬಿಡಲಿಲ್ಲ.
-5-
ಬೇಂದ್ರೆಯವರನ್ನು ಬಹುವಾಗಿ ಮೆಚ್ಚಿಕೊಂಡ ಕುರ್ತಕೋಟಿಯವರಿಗೆ ಕುವೆಂಪು ಕಾವ್ಯ ರುಚಿಸಿರಲಿಲ್ಲ. ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಕುವೆಂಪು ಅವರನ್ನು ಇದು ಸಾಕಷ್ಟು ಬಾಧಿಸಿತ್ತು. ಕುವೆಂಪು ಕವಿತೆಗಳಲ್ಲಿಯ ವಿರೋಧಾಭಾಸವನ್ನು ಕುರ್ತಕೋಟಿ ಗುರುತಿಸುತ್ತಿದ್ದುದು ಹೀಗೆ;
ಕುವೆಂಪು ಕಾವ್ಯದಲ್ಲಿ ಉಪಮಾನ ಮತ್ತು ಉಪಮೇಯಗಳ ಬೆರಕೆಯಿಂದಾಗಿ ವೈಚಾರಿಕ ಗೊಂದಲವೂ ಉಂಟಾಗುತ್ತದೆ. ಕುವೆಂಪು ಅವರ ಎಷ್ಟೋ ಕವಿತೆಗಳಲ್ಲಿ ಕವಿತೆ ಹೇಳುವುದು ಒಂದಿದ್ದರೆ ಕವಿ ಹೇಳುವುದು ಇನ್ನೊಂದಾಗುತ್ತದೆ. ಅವರ ಕವಿತೆಗಳಲ್ಲಿಯ ವಿರೋಧವೆಂದರೆ ಕವಿತೆಯ ಮಾತಿನಲ್ಲಿ ಕವಿಯ ಮಾತು ಸೇರಿಕೊಂಡು ಇಲ್ಲದ ಗೊಂದಲವೆಬ್ಬಿಸುವುದು;
ವಿಶ್ವದ ಕೇಂದ್ರದ ವೃಂದಾವನದಲಿ
ಜೀವನಯಮುನೆಯ ತೀರದಲಿ
ರಾಗದ ಯೋಗದ ಮಧುಸಂಸಾರದ
ಕದಂಬ ತರುವರ ಮೂಲದಲಿ
ಈ ಕುವೆಂಪು ಕವಿತೆಯ ಕುರಿತು ಕುರ್ತಕೋಟಿ ಹೇಳುತ್ತಾರೆ;
ರಾಸಕ್ರೀಡೆಯನ್ನು ಬಣ್ಣಿಸುವ ಕವಿತೆಯ ಮೊದಲಿನ ನಾಲ್ಕು ಸಾಲುಗಳಿವು. ವೃಂದಾವನ, ಯಮುನೆ, ಕದಂಬವೃಕ್ಷ ಇವುಗಳಿಗೆ ಇಲ್ಲಿ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅವುಗಳಿಗಿರುವುದು ಅಲಂಕಾರಿಕ ಅಸ್ತಿತ್ವ. ಕವಿ ಕವಿತೆಯ ಮೇಲೆ ಅಲಂಕಾರಿಕತೆ ಹೇರಿರುವುದರಿಂದ ಈ ಪ್ರತಿಮೆಗಳಿಗೆ ಬಿಡುಗಡೆ ಇಲ್ಲ. ಪುಣ್ಯಕ್ಕೆ ಗೋಪಿಯರು ತಾತ್ಪೂರ್ತಿಕವಾಗಿ ಇದರಿಂದ ತಪ್ಪಿಸಿಕೊಂಡು ಕುಣಿಯುತ್ತಾರೆ.
ಹಿಮಮಣಿ ಎಂಬ ಕವಿತೆಯಲ್ಲಿ ಕುವೆಂಪು ನಿಂತು ಸುಮ್ಮನೆ ನೋಡಿ ಮರೆ, ಅಲೋಚನೆಯನತ್ತ ಕಡೆ ತಳ್ಳಿ ಎಂದು ಕವಿ ಕವಿತೆಗೆ ಗದರಿಸುತ್ತಾನೆ. ಹಿಮಮಣಿಗಳ ಚೆಲುವನ್ನು `ನಿಂತು ಸುಮ್ಮನೆ ನೋಡಿ ಮರೆ'ಯಬೇಕಾಗಿದ್ದರೆ ಕವಿತೆಯನ್ನು ಬರೆಯುವ ಕಾರಣವೂ ಇರಲಿಲ್ಲ. ಇಲ್ಲಿ ಇನ್ನೂ ಒಂದು ಮಾತನ್ನು ಹೇಳಬಹುದು. ಕವಿ ಕವಿತೆಗಿಂತ ಜಾಣನಲ್ಲ. ಜಾಣನಾಗಲು ಹೋಗಬಾರದು.
ಕುವೆಂಪು ಅವರ ಭಾವಗೀತಗಳೆಲ್ಲ ಬಹುಶಃ ಇದೇ ರೀತಿಯಲ್ಲಿರುವಂಥವು.
ಇವನ್ನೆಲ್ಲ ನೋಡಿದವರು ಕುರ್ತಕೋಟಿಯವರ ಸಮಸ್ಯೆಯೆಂದರೆ ಬೇಂದ್ರೆ ಕಾವ್ಯವನ್ನು ಕಾವ್ಯದ ಮಾನದಂಡವನ್ನಾಗಿ ಮಾಡಿಕೊಂಡದ್ದು ಎಂದರು. ಕುವೆಂಪು ಸಾಹಿತ್ಯದ ಮೇಲೆ ಅಸಹಾನುಭೂತಿ ವಿಮರ್ಶೆ ಮತ್ತು ಬೇಂದ್ರೆ ವಿಚಾರದಲ್ಲಿ ಟೀಕೆಯೇ ಇಲ್ಲದ ಆರಾಧನೆಯ ವಿಮರ್ಶಕ ಎಂದು ಕರೆದರು. ಅವರಿಗೆ ಪುಣೇಕರರಂತೆ ನವ್ಯಸಾಹಿತ್ಯದ ಬಗ್ಗೆ ಪೂರ್ವಗ್ರಹವಿದೆ ಎಂಬ ಟೀಕೆಯೂ ಕೇಳಿಬಂತು.
ಕುವೆಂಪು ಅವರ ಕಾವ್ಯವನ್ನು ಕುರ್ತಕೋಟಿ ಒಪ್ಪಿಕೊಳ್ಳಲೇ ಇಲ್ಲ. ಹೀಗಾಗಿ ಕುವೆಂಪು ಈ ಕೆಳಗಿನ ಪದ್ಯವನ್ನು ಕೀರ್ತಿನಾಥ ಕುರ್ತಕೋಟಿಯವರ ಕುರಿತೇ ಬರೆದಿದ್ದಾರೆ ಎಂದು ಛೇಡಿಸುವವರಿದ್ದಾರೆ;
ಪೀಡಿಸುತ್ತಿಹೆ ಏಕೆ? ತೊಲಗಾಚೆ, ಕೀರ್ತಿಶನಿ;
ಸಾಕೆನಗೆ ನಿನ್ನ ಸಹವಾಸ ವಿಭವಭ್ರಾಂತಿ!
.......
ಕೀರ್ತಿ ಸಪ್ತಮ ವೈರಿ; ಏಕೆನೆ, ತಿರೆವೊಗಳ್ಕೆ
ಮಾಲೆಯಿಕ್ಕಿದೆ ತನ್ನ ಮೆಚ್ಚ್; ಆ ಕ್ಷುದ್ರತಾ
ಭೂತಕ್ಕೆ ನಿತ್ಯಬಲಿ;
ಆದರೆ ಕೀರ್ತಿನಾಥ ಕುರ್ತಕೋಟಿ ಹುಟ್ಟಿದ್ದು ಅಕ್ಟೋಬ್ 10, 1928. ಕುವೆಂಪು `ಕೀರ್ತಿಶನಿ' ಕವಿತೆ ಬರೆದದ್ದು ಜನವರಿ 3, 1941.
ಆಗಿನ್ನೂ ಕುರ್ತಕೋಟಿಯವರಿಗೆ ಹದಿಮೂರೇ ವರ್ಷ.
7 comments:
ನಮಸ್ಕಾರ ಜೋಗಿ, ಇಷ್ಟುದ್ದದ ಲೇಖನಗಳನ್ನು ಬರೆದು ನಮಗೆ ಅರಿಯದ ವಿವರಗಳನ್ನು ಬಡಿಸುತ್ತಿರುವುದಕ್ಕಾಗಿ.
ಕುರ್ತಕೋಟಿಯವರು ಬೇಂದ್ರೆ ಕಾವ್ಯಾರಾಧಕರು ಎನ್ನುವ ಮಾತು ತಿಳಿದಿತ್ತು. ಅದಕ್ಕಿಂತ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿತು. ಅವರ ಜ್ಞಾನದ ಬಗ್ಗೆಯೂ ಕೇಳಿದ್ದೆ, ನೆನಪಿನ ಬಗ್ಗೆ ಹೇಳಿದಿರಿ. ವಂದನೆಗಳು, ಧನ್ಯವಾದಗಳು.
ಅತ್ಯಂತ ಖುಷಿ ಕೊಟ್ಟ ಲೇಖನ. ಇದನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ನಂತರ ನಿಜವಾದ ಆತಂಕ ಶುರುವಾಗಿದೆ! ಈ ಆತಂಕವು ಥೇಟ್, ಕುರ್ತುಕೋಟಿಯವರ ಓರಿಗೆಯವರಿಗಿದ್ದಷ್ಟು, ಅಥವಾ ಅದಕ್ಕಿಂತಲೂ ಕೊಂಚ ಹೆಚ್ಚಿನದು. ನಿಮ್ಮ ಹತ್ತಿರ ಮಾತನಾಡುವುದಕ್ಕಾಗಲೀ ಹಂಚಿಕೊಳ್ಳುವುದಕ್ಕಾಗಲೀ ಸಾಹಿತ್ಯೇತರ ಸಂಗತಿಗಳು ಬಹಳಷ್ಟು ಇದ್ದರೂ, ಪಾಂಡಿತ್ಯದ ಅಂತರ ನನ್ನನ್ನು ನಡಗಿಸ ಹತ್ತಿದೆ. ಇನ್ನು ಮುಂದೆ ಮುಖಾಮುಖಿಯ ಅಥವಾ ದೂರವಾಣಿಯ ಮಾತುಕತೆಗಳಿಗಿಂತ ನಿಮ್ಮೊಂದಿಗೆ ಬ್ಲಾಗ್ ಮೂಲಕವಷ್ಟೇ ಮಾತನಾಡ ಬಯಸುತ್ತೇನೆ!!
ನಿಮ್ಮ ವಿಜ್ಞಾನದ ಬರಹಗಳನ್ನು ಓದಿ ನಾನೂ ಬೆರಗಾಗಿದ್ದೇನೆ. ವಾರವಾರ ಅದೆಲ್ಲಿಂದ ಅಷ್ಟೊಂದು ವೈಜ್ಞಾನಿಕ ಸಂಗತಿಗಳನ್ನು ಹುಡುಕುತ್ತೀರಿ ಮಾರಾಯ್ರೇ.
ಸಾಹಿತ್ಯವಾದರೆ ಬರೆಯುವುದು ಸುಲಭ. ಇದು ಭಾವಕ್ಕೆ ಸಂಬಂಧಿಸಿದ್ದು. ಆದರೆ ವಿಜ್ಞಾನ ಅದರ ಕರಾರುವಾಕ್ಕು, ನಿಖರತೆ ಮತ್ತು ಸ್ಪಷ್ಟತೆಗಳಿಂದ ನನ್ನನ್ನು ಸದಾ ಬೆಚ್ಚಿಬೀಳಿಸುತ್ತದೆ.
ಆಗಾಗ ಫೋನಿನಲ್ಲೂ ಮಾತಾಡುತ್ತಿರೋಣ.
ಜೋಗಿ
ಜೋಗಿ, ನಮಸ್ಕಾರ. ವಿಮರ್ಶಕರನ್ನೇ ವಿಮರ್ಶಿಸಿ "ವಿವಿಮರ್ಶಕ" ಎನಿಸಿಕೊಂಡಿದ್ದೀರಿ!
ಕೆಲವು ಟಿಪ್ಪಣಿಗಳು:
೧. "ಆದೌ ದೇವಕಿ ದೇವಿಗರ್ಭ ಜನನಂ..." ಶ್ಲೋಕವು ಏಕಶ್ಲೋಕಿ ಮಹಾಭಾರತ ಅಲ್ಲ, ಬದಲಿಗೆ ಏಕಶ್ಲೋಕಿ ಭಾಗವತ.
೨. ಏಕಶ್ಲೋಕಿ ಮಹಾಭಾರತವು ಇಂತಿದೆ:
ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷ್ಯಾಗೃಹೆ ದಾಹನಂ
ದ್ಯೂತೇ ಶ್ರೀಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಂ
ಲೀಲಾಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾ ಜೃಂಭಣಂ
ಭೀಷ್ಮದ್ರೋಣಸುಯೋಧನಾದಿ ಮಥನಂ ಏತನ್ಮಹಾಭಾರತಂ ||
೩. ನೀವು ಉಲ್ಲೇಖಿಸಿರುವ ಏಕಶ್ಲೋಕಿ ರಾಮಾಯಣ ಸರಿಯಾಗಿಯೇ ಇದೆ. ರಾಮಾಯಣವನ್ನು ಇನ್ನೂ ಸಂಕ್ಷಿಪ್ತವಾಗಿ - ನಾಲ್ಕೇ ನಾಲ್ಕು ಕ್ರಿಯಾಪದಗಳ ರೂಪದಲ್ಲಿ - ಹೇಳುವ ಕ್ರಮವೊಂದಿದೆ: "ಹುಟ್ಟಿ ಕಟ್ಟಿ ಕುಟ್ಟಿ ಮುಟ್ಟಿ" ಎಂದು. ಅಂದರೆ, ಶ್ರೀರಾಮಚಂದ್ರನು ಹುಟ್ಟಿ, ವಾನರಸೇನೆಯನ್ನು ಕಟ್ಟಿ, ದಶಶಿರನನ್ನು ಕುಟ್ಟಿ, ವಾಪಸ್ ಅಯೋಧ್ಯೆಗೆ ಮುಟ್ಟಿದಾಗ ರಾಮಾಯಣ ಮುಗಿಯಿತು!
ವಿಚಿತ್ರಾನ್ನ ಭಟ್ಟರಿಗೆ ಸಚಿತ್ರ ವಂದನೆ,
ನೀವು ಉದಾಹರಿಸಿದ ಏಕಶ್ಲೋಕವನ್ನು ನಾನು ಕೇಳಿರಲೇ ಇಲ್ಲ. ನಮ್ಮೂರಲ್ಲಿ ಊಟಕ್ಕೆ ಕುಳಿತಾಗ ಚೂರ್ಣಿಕೆ ಹೇಳುತ್ತಾರೆ. ಅಲ್ಲೆಲ್ಲೂ ಇದನ್ನು ಹೇಳಿದ್ದನ್ನು ನಾನು ಕಾಣಲಿಲ್ಲ. ಹೊಸದನ್ನು ತಿಳಿಸಿಕೊಟ್ಟಿದ್ದಕ್ಕೆ, ತಪ್ಪನ್ನು ತೋರಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್.
ಅದು ಕೃಷ್ಣಕತೆಯಾದ್ದರಿಂದ ಭಾಗವತ ಅನ್ನೋದು ಹೊಳೆಯಲೇ ಇಲ್ಲ ನೋಡಿ, ಛೇ.
ಜೋಗಿ
ಬೇಂದ್ರೆಯವರನ್ನು ವಿಮರ್ಶಿಸುತ್ತಿದ್ದ ಕುರ್ತುಕೋಟಿಯವರು ’ವಿಮರ್ಶಕ’ರಾದರೆ, ಕುರ್ತುಕೋಟಿಯವರನ್ನು ವಿಮರ್ಶಿಸಿದ ಜೋಗಿ ’ವಿವಿಮರ್ಶಕ’ ಅಂತಾರೆ ವಿಚಿತ್ರಾನ್ನದ ಭಟ್ಟರು. ಹಾಗಿದ್ದರೆ ಭಟ್ಟರನ್ನು ’ವಿವಿವಿಮರ್ಶಕ’ರು ಅನ್ನಬಹುದೆ? ಅರ್ಥಾತ್ ವೀಕ್ಯೂಬ್ಮರ್ಶಕರಾಗಿಬಿಟ್ಟರು ಭಟ್ಟರು. But ಜೋಶಿಯವರು ಭಟ್ಟರಾಗಿದ್ದು ಎಂದು?
``ಎಲ್ಲೆಲ್ಲೂ ಇರುವುದು ಅವನ ಮನೆಯೇ ಎಂದಾಗ
ನಮ್ಮ ನಿಮ್ಮ ಮನೆಗಳ ಭೇದ ಅರ್ಥಹೀನವಾಗುತ್ತದೆ''- ಕೀರ್ತಿನಾಥ ಕುರ್ತಕೋಟಿ.
ಜೋಗಿ ಸರ್ ಗೆ ನಮಸ್ಕಾರ,
ಮೊನ್ನೆಯಷ್ಟೇ ಮೊದಲಬಾರಿಗೆ ನಿಮ್ಮ ಬ್ಲೊಗ್ ವಿಸಿಟ್ ಮಾಡಿದೆ. ಕೀರ್ತಿನಾಥರ ಕುರಿತ ಲೇಖನ ಓದುತ್ತ ಇದನ್ನು ಬರೆಯಬೇಕೆನ್ನಿಸಿತು.
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಂಎ ಪತ್ರಿಕೋದ್ಯಮ ಓದಲು ಹೋಗಿ ಒಂದು ವಾರವಾಗಿತ್ತಷ್ಟೆ. ಒಂದು ಸಂಜೆ ಕುರ್ತಕೋಟಿ ದಂಪತಿಗಳು ತೀರಿಕೊಂಡ ಸುದ್ದಿ ಟಿವಿಯಲ್ಲಿ ಬಿತ್ತರವಾಯಿತು.
ಆ ದಿನಗಳಲ್ಲೆ ಕೀರ್ತಿನಾಥರ ಬರಹದ ಪರಿಚಯವಾಗಿದ್ದು, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಲೇಖನಗಳಿಂದ. ಅವರು ಭಾರತದ ಅತ್ಯಂತ ಶ್ರೇಷ್ಟ ವಿಮರ್ಶಕರಲ್ಲಿ ಒಬ್ಬರು ಎಂಬುದನ್ನು ಡಾ. ಯು. ಆರ್. ಅನಂತಮೂರ್ತಿಯವರು, ಮತ್ತಿತರರ ಲೇಖನಗಳಿಂದ ತಿಳಿದು ಹೆಮ್ಮೆ ಪಟ್ಟಿದ್ದು ಹೌದಾದರೂ ಅವರ ವಿಮರ್ಶೆಯ ಆಳ, ಶ್ರೇಷ್ಟತೆಯನ್ನು ಸ್ವತಃ ಅರಿಯಲು ಕನ್ನಡ,ಇಂಗ್ಲೀಶ್, ಸಂಸ್ಕ್ರತ ಸಾಹಿತ್ಯವನ್ನು ತುಂಬಾ ಆಳವಾಗಿ ಅಭ್ಯಸಿಸಬೇಕು ಎಂಬುದು ಅರಿವಾಗಿತ್ತು.
ಅವರ ಮರಣವೂ ನನಗೆ ಒಂದು ದೊಡ್ಡ ಅಚ್ಚರಿ ಹಾಗೂ ಮಹತ್ತರ ಪಾಠವಾಗಿ ಕಂಡಿದೆ. ಪತಿ ತೀರಿಕೊಂಡ ಸುದ್ದಿ ತಿಳಿದು ಪತ್ನಿ ದೇಹತ್ಯಾಗ ಮಡುವುದು ಈ ದೇಶದಲ್ಲಿ ಸಹಜವಾಗಿ ಆಗಿರುವಂತದ್ದು. ಆದರೆ ಪತ್ನಿ ತೀರಿಕೊಂಡ ಸ್ವಲ್ಪ ಹೊತ್ತಿನಲ್ಲೇ ಕೀರ್ತಿನಾಥರೂ ದೇಹ ತ್ಯಾಗ ಮಾಡಿದರಲ್ಲ, ಅವರ ದಾಂಪತ್ಯ ಎಂತಹ ಶ್ರೇಷ್ಠವಾದದ್ದಿರಬಹುದು ಎಂತಲೇ ಅನೇಕ ಬಾರಿ ಯೊಚಿಸಿದ್ದೇನೆ.
ವಿಶ್ವವಿದ್ಯಾಲಯದ ಆ ದಿನಗಳಲ್ಲಿ ಜೇಬಿನಲ್ಲೊಂದು "ಸ್ಕ್ರಾಪ್ ಬುಕ್" ಇರುತ್ತಿತ್ತು (ಈಗಲೂ); ಅನ್ನಿಸಿದ್ದನ್ನು, ಓದಿ ಆನಂದಿಸಿದ ಸಾಲುಗಳನ್ನು ಬರೆದುಕೊಳ್ಳುವುದ್ದಕ್ಕೆ. ಆಗೆಲ್ಲಾ ಕೀರ್ತಿನಾಥರ "ಹೊರಗಿನಿಂದ ಬಂದ ಬೆಳಕು ನಮ್ಮ ಕಂಗಳಿಗೆ ನೋಡಲು ಜಾಗರಿಸುವಂತೆ ಹೊರಗಿನಿಂದ ಬಂದ ಶಕ್ತಿಯೊಂದು ಮನಸ್ಸಿಗೂ ಪ್ರೆರಣೆಯನ್ನು ಕೊಡುತ್ತಿರಬೇಕು", "ಪ್ರಕೃತಿ ಸಂಸ್ಕೃತಿಯಗುವುದು ದಿನನಿತ್ಯದ ವ್ಯಾಪಾರ, ಸಂಸ್ಕೃತಿ ಪ್ರಕೃತಿಯಾಗುವುದಕ್ಕೆ ಜನ್ಮಾಂತರದ ದುಡಿತ ಬೇಕು" ಎಂಬಂತಹ ಸಾಲುಗಳನ್ನು ಬರೆದಿಟ್ಟುಕೊಂಡು ಮರಗಳ ನಡುವಿನ ದಾರಿಯಲ್ಲಿ ಒಂಟಿ ನಡೆಯುವಾಗ ತೆಗೆದು ಓದುತ್ತ, ಸಂಭ್ರಮಿಸುತ್ತ, ಅವರ ಬರಹಗಳ ಲೋಕದಲ್ಲಿಯೇ ತೇಲುತ್ತಿದ್ದುದು ನೆನಪಾಗುತ್ತದೆ.
ಆಗೆಲ್ಲ ಅನ್ನಿಸುತ್ತಿತ್ತು ಕೀರ್ತಿನಾಥ ಕುರ್ತಕೋಟಿಯವರು ನಡೆದದ್ದೇ ದಾರಿ, ಅವರು ಒಂಟಿಸಲಗದಂತೆ ಎಂದು. ನಮ್ಮ ಅನೇಕ ವಿಮರ್ಶಕರ ಬರಹಗಳನ್ನು ನೋಡಿದರೆ ಅವುಗಳ ತುಂಬ "ಕೊಟೇಶನ್ಸ್" ಕಾಣಿಸುತ್ತಿವೆ. ಅವರೆಲ್ಲ ಮತ್ಯಾರದ್ದೋ ಮಾತುಗಳನ್ನು ಉದ್ದರಿಸುತ್ತ ಆ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತ ಹೋಗುತ್ತಾರೆ. ಆದರೆ ಕೀರ್ತಿನಾಥರಲ್ಲಿ ಅಂತಹ "ಕೊಟೇಶನ್ಸ್" ತೀರ ಕಡಿಮೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅವರು ಯಾರಿಗೋ ಉತ್ತರ ಕೊಡುತ್ತಿದ್ದಾರೆ ಎಂಬುದು ಕಾಣಿಸುತ್ತದೆ. ಅವರನ್ನು ಓದಲಾಗುವುದಿಲ್ಲ, ಅಧ್ಯಯನ ಮಾಡಬೇಕಾಗುತ್ತದೆ ಎಂದು ನನಗನ್ನಿಸುತ್ತದೆ.
ಧಾರವಾಡದಲ್ಲಿದ್ದಾಗಲೇ ಅವರ "ನೂರುಮರ ನೂರುಸ್ವರ", "ಉರಿಯ ನಾಲಿಗೆ" ಮುಂತಾದ ಪುಸ್ತಕಗಳನ್ನು ಓದಿದ್ದು. ಧಾರವಾಡದ ಸೆಕೆಂಡ್ ಹ್ಯಾಂಡ್ ಬುಕ್ ಸ್ಟಾಲ್ ಒಂದರಲ್ಲಿ ಅವರ "ಕನ್ನಡ ಸಾಹಿತ್ಯ ಸಂಗಾತಿ" ಕೇವಲ ೩೦ ರೂಗೆ ಸಿಕ್ಕಿದ್ದೂ ಸಂಭ್ರಮವೇ ಆಗಿತ್ತು. ಧಾರವಾಡದ ಕುರಿತ ಲೇಖನವೊಂದರಲ್ಲಿ ಕೀರ್ತಿನಾಥರು ಬರೆಯುತ್ತಾರೆ, "ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ಸ್ಥಳಾಂತರಿಸುವಾಗ ಕರ್ಜನ್ ಸಮಿತಿ ಧಾರವಾಡವನ್ನೂ ಒಂದೆಂದು ಆರಿಸಿತ್ತು. ಆದರೆ ಭಾರತದ ಇತಿಹಾಸ ದೆಹಲಿಯನ್ನು ಆಯ್ದುಕೊಂಡಿತು. ಇತಿಹಾಸದ ದೈವ ಧಾರವಾಡವನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು."
[ಉದ್ಧರಿಸಿದ ವಾಕ್ಯಗಳು ಹಳೆಯ "ಸ್ಕ್ರ್ಯಾಪ್ ಬುಕ್" ನಿಂದ ಆರಿಸಿ ಬರೆದದ್ದು. ಅಕ್ಷರಶಃ ಕೀರ್ತಿನಾಥರದೇ ಸಾಲುಗಳೋ, ಬದಲಾಯಿಸಿದ್ದೆನೋ ನೆನಪಿಲ್ಲ. ಭಾವಾರ್ಥವಂತೂ ಅವರದ್ದೇ.]
ರಾಘವೇಂದ್ರ ಎಂ.
ಶಿವಮೊಗ್ಗ.
http://raaghava-haagesummane.blogspot.com/
_
Post a Comment